<p><strong>ಹೊನ್ನಾವರ</strong>: ತಾಲ್ಲೂಕಿನ ಹೆರಾವಲಿ ಗ್ರಾಮದ ಬಡ್ನಕೋಡ್ಲ ಎಂಬ ಊರಿನ ಹಳ್ಳವೊಂದರಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಜಿಂಕೆಯೊಂದು ವಾರದ ಹಿಂದೆ ಕಂಡುಬಂದಿದ್ದು ತಡವಾಗಿ ಬೆಳಕಿಗೆ ಬಂದಿದೆ.</p>.<p>‘ಕಬ್ಬಿಣದ ತಂತಿಯಿಂದ ಮಾಡಿದ್ದ ಉರುಳು ಸುತ್ತಿಕೊಂಡಿದ್ದ ಕಾಲಿನಲ್ಲಿ ಉಂಟಾಗಿದ್ದ ಗಾಯದಲ್ಲಿ ಹುಳುಗಳಾಗಿದ್ದವು. ಕೊಂಬು ಕೂಡ ಮುರಿದಿದ್ದ ಜಿಂಕೆ ತೀರ ಅಸ್ವಸ್ಥ ಸ್ಥಿತಿಯಲ್ಲಿತ್ತು’ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.</p>.<p>ಸ್ಥಳಕ್ಕ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಅಸ್ವಸ್ಥಗೊಂಡಿದ್ದ ಜಿಂಕೆಯನ್ನು ಸಾಗಿಸುವಾಗ ಮಾರ್ಗ ಮಧ್ಯೆ ಅದು ಮೃತಪಟ್ಟಿದೆ.</p>.<p>‘ಈಚಿನ ದಿನಗಳಲ್ಲಿ ಜಿಂಕೆ, ಕಾನು ಕುರಿ ಮೊದಲಾದ ಕಾಡುಪ್ರಾಣಿಗಳು ಈ ಭಾಗದಲ್ಲಿ ಸಾಯುತ್ತಿರುವುದು ಆತಂಕಕ್ಕೆಡೆಮಾಡಿದೆ. ಘಟನೆಗೆ ಕಾರಣ ಕಂಡುಹಿಡಿದು ಅರಣ್ಯ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸುವ ಜೊತೆಗೆ ಅರಣ್ಯ ಹಾಗೂ ಕಾಡುಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು’ ಎಂದು ವನ್ಯಜೀವಿಪ್ರೇಮಿಗಳು ಆಗ್ರಹಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾವರ</strong>: ತಾಲ್ಲೂಕಿನ ಹೆರಾವಲಿ ಗ್ರಾಮದ ಬಡ್ನಕೋಡ್ಲ ಎಂಬ ಊರಿನ ಹಳ್ಳವೊಂದರಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಜಿಂಕೆಯೊಂದು ವಾರದ ಹಿಂದೆ ಕಂಡುಬಂದಿದ್ದು ತಡವಾಗಿ ಬೆಳಕಿಗೆ ಬಂದಿದೆ.</p>.<p>‘ಕಬ್ಬಿಣದ ತಂತಿಯಿಂದ ಮಾಡಿದ್ದ ಉರುಳು ಸುತ್ತಿಕೊಂಡಿದ್ದ ಕಾಲಿನಲ್ಲಿ ಉಂಟಾಗಿದ್ದ ಗಾಯದಲ್ಲಿ ಹುಳುಗಳಾಗಿದ್ದವು. ಕೊಂಬು ಕೂಡ ಮುರಿದಿದ್ದ ಜಿಂಕೆ ತೀರ ಅಸ್ವಸ್ಥ ಸ್ಥಿತಿಯಲ್ಲಿತ್ತು’ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.</p>.<p>ಸ್ಥಳಕ್ಕ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಅಸ್ವಸ್ಥಗೊಂಡಿದ್ದ ಜಿಂಕೆಯನ್ನು ಸಾಗಿಸುವಾಗ ಮಾರ್ಗ ಮಧ್ಯೆ ಅದು ಮೃತಪಟ್ಟಿದೆ.</p>.<p>‘ಈಚಿನ ದಿನಗಳಲ್ಲಿ ಜಿಂಕೆ, ಕಾನು ಕುರಿ ಮೊದಲಾದ ಕಾಡುಪ್ರಾಣಿಗಳು ಈ ಭಾಗದಲ್ಲಿ ಸಾಯುತ್ತಿರುವುದು ಆತಂಕಕ್ಕೆಡೆಮಾಡಿದೆ. ಘಟನೆಗೆ ಕಾರಣ ಕಂಡುಹಿಡಿದು ಅರಣ್ಯ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸುವ ಜೊತೆಗೆ ಅರಣ್ಯ ಹಾಗೂ ಕಾಡುಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು’ ಎಂದು ವನ್ಯಜೀವಿಪ್ರೇಮಿಗಳು ಆಗ್ರಹಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>