<p><strong>ಹುಬ್ಬಳ್ಳಿ:</strong> ಮಂಟೂರು ರಸ್ತೆಯಲ್ಲಿ ಮೀನು ಹಾಗೂ ಮಾಂಸದ ಮಾರುಕಟ್ಟೆ ಆರಂಭಿಸಿರುವುದರಿಂದ ರೈತರಿಗೆ, ಜನರಿಗೆ ತೊಂದರೆಯಾಗುತ್ತಿದೆ. ಅದನ್ನು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ರೈತರು ಹುಬ್ಬಳ್ಳಿಯಲ್ಲಿ ಚಕ್ಕಡಿ ಮೆರವಣಿಗೆ ನಡೆಸಿದರು.</p>.<p>ಈ ಭಾಗದಲ್ಲಿ ರೈತರ ಜಮೀನಗಳಿದ್ದು, ರೈತರು ತಿರುಗಾಡುವ ರಸ್ತೆಯಾಗಿದೆ. ಈಗ ಅಲ್ಲಿ ಮೀನು, ಮಾಂಸದ ಮಾರುಕಟ್ಟೆ ಆರಂಭಿಸಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ದೂರಿದ್ದಾರೆ.</p>.<p>ವೀರಾಪುರ, ಯಲ್ಲಾಪುರ, ಬಿಡನಾಳ, ಗಬ್ಬೂರು, ಬೊಮ್ಮಾಪುರ, ಗಣೇಶಪೇಟ ಸೇರಿದಂತೆ ವಿವಿಧ ಪ್ರದೇಶಗಳ ರೈತರಿಗೆ ತೊಂದರೆಯಾಗುತ್ತಿದೆ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.</p>.<p>ಮಂಟೂರು ರಸ್ತೆಯನ್ನು 14 ಮೀಟರ್ರಿಂದ 33 ಮೀಟರ್ಗೆ ವಿಸ್ತರಿಸಬೇಕು. ಹಳ್ಯಾಳದಿಂದ ಮಂಟೂರು ಸೇರುವ 4 ಕಿ.ಮೀ. ರಸ್ತೆ, ಹಳ್ಯಾಳದಿಂದ ಗುಡೆನಕಟ್ಟಿಯವರೆಗಿನ ರಸ್ತೆ ನಿರ್ಮಿಸಬೇಕು. ಹುಬ್ಬಳ್ಳಿ–ಹಳ್ಯಾಳ ರಸ್ತೆಯಲ್ಲಿರು ರೈಲ್ವೆ ಮಾರ್ಗ ದಾಟಲು ಮೇಲು ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.</p>.<p>ಬಂಕಾಪುರ ವೃತ್ತ, ನ್ಯೂ ಇಂಗ್ಲಿಷ್ ಶಾಲೆ, ಕಮರಿಪೇಟೆ ಪೊಲೀಸ್ ಠಾಣೆ, ಬೈರಿದೇವರಕೊಪ್ಪ, ಬಿಡನಾಳ ಬಳಿ ಇರುವ ದರ್ಗಾದಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ಶಿವಾನಂದ ಮುತ್ತಣ್ಣವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಮಂಟೂರು ರಸ್ತೆಯಲ್ಲಿ ಮೀನು ಹಾಗೂ ಮಾಂಸದ ಮಾರುಕಟ್ಟೆ ಆರಂಭಿಸಿರುವುದರಿಂದ ರೈತರಿಗೆ, ಜನರಿಗೆ ತೊಂದರೆಯಾಗುತ್ತಿದೆ. ಅದನ್ನು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ರೈತರು ಹುಬ್ಬಳ್ಳಿಯಲ್ಲಿ ಚಕ್ಕಡಿ ಮೆರವಣಿಗೆ ನಡೆಸಿದರು.</p>.<p>ಈ ಭಾಗದಲ್ಲಿ ರೈತರ ಜಮೀನಗಳಿದ್ದು, ರೈತರು ತಿರುಗಾಡುವ ರಸ್ತೆಯಾಗಿದೆ. ಈಗ ಅಲ್ಲಿ ಮೀನು, ಮಾಂಸದ ಮಾರುಕಟ್ಟೆ ಆರಂಭಿಸಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ದೂರಿದ್ದಾರೆ.</p>.<p>ವೀರಾಪುರ, ಯಲ್ಲಾಪುರ, ಬಿಡನಾಳ, ಗಬ್ಬೂರು, ಬೊಮ್ಮಾಪುರ, ಗಣೇಶಪೇಟ ಸೇರಿದಂತೆ ವಿವಿಧ ಪ್ರದೇಶಗಳ ರೈತರಿಗೆ ತೊಂದರೆಯಾಗುತ್ತಿದೆ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.</p>.<p>ಮಂಟೂರು ರಸ್ತೆಯನ್ನು 14 ಮೀಟರ್ರಿಂದ 33 ಮೀಟರ್ಗೆ ವಿಸ್ತರಿಸಬೇಕು. ಹಳ್ಯಾಳದಿಂದ ಮಂಟೂರು ಸೇರುವ 4 ಕಿ.ಮೀ. ರಸ್ತೆ, ಹಳ್ಯಾಳದಿಂದ ಗುಡೆನಕಟ್ಟಿಯವರೆಗಿನ ರಸ್ತೆ ನಿರ್ಮಿಸಬೇಕು. ಹುಬ್ಬಳ್ಳಿ–ಹಳ್ಯಾಳ ರಸ್ತೆಯಲ್ಲಿರು ರೈಲ್ವೆ ಮಾರ್ಗ ದಾಟಲು ಮೇಲು ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.</p>.<p>ಬಂಕಾಪುರ ವೃತ್ತ, ನ್ಯೂ ಇಂಗ್ಲಿಷ್ ಶಾಲೆ, ಕಮರಿಪೇಟೆ ಪೊಲೀಸ್ ಠಾಣೆ, ಬೈರಿದೇವರಕೊಪ್ಪ, ಬಿಡನಾಳ ಬಳಿ ಇರುವ ದರ್ಗಾದಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ಶಿವಾನಂದ ಮುತ್ತಣ್ಣವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>