‘ಮೋದಿಯವರು ದೇಶದ ಜನತೆಗೆ ‘ನಾನೂ ತಿನ್ನುವುದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ. ಅಲ್ಲದೇ ಕಪ್ಪು ಹಣವನ್ನು ಬಯಲಿಗೆಳೆಯುತ್ತೇನೆ‘ ಎಂದು ಹೇಳಿಕೊಳ್ಳುತ್ತಾ ಭ್ರಷ್ಟಾಚಾರ ನಡೆಸಿರುವುದು ಚುನಾವಣಾ ಬಾಂಡ್ ಹಗರಣ ಸಾಬೀತು ಪಡಿಸುತ್ತದೆ. ಅಧಿಕಾರದ ದುರುಪಯೋಗ, ಭ್ರಷ್ಟಾಚಾರ, ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ, ಬ್ಲಾಕ್ಮೇಲ್ ಅಂಶಗಳನ್ನು ಈ ಹಗರಣ ಎತ್ತಿ ತೋರಿಸುತ್ತದೆ. ಚುನಾವಣಾ ಬಾಂಡ್ ನೀಡಿದ ಕಂಪನಿಗಳು, ಸಂಸ್ಥೆಗಳು ಲಾಭದಾಯಕ ಗುತ್ತಿಗೆಗಳನ್ನು ಪಡೆದಿರುವುದು ಕಂಡು ಬಂದಿದೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಸಮಿತಿ ಆಗ್ರಹಿಸಿದೆ.