‘ಏಳು ಎಕರೆ ಜಮೀನು ಹೊಂದಿರುವ ಅವರು, ತಿರ್ಲಾಪೂರ ಕೆವಿಜಿ ಬ್ಯಾಂಕಿನಲ್ಲಿ ₹1.50 ಲಕ್ಷ ಬೆಳೆ ಸಾಲ, ಹೆಂಡತಿ ಹಾಗೂ ಮನೆಯವರ ಹೆಸರಿನಲ್ಲಿ ಸ್ತ್ರೀ ಶಕ್ತಿ ಗುಂಪುಗಳಲ್ಲಿ ಮತ್ತು ಕೈಗಡ ಸೇರಿ ವಿವಿಧೆಡೆ ಸಾಲ ಮಾಡಿಕೊಂಡಿದ್ದರು. ಸರಿಯಾಗಿ ಬೆಳೆ ಬಾರದ ಕಾರಣ ಸಾಲ ತೀರಿಸುವ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.