‘ರಾಜೇಂದ್ರ ಕಾಲೊನಿಯ ಸಿಎ ನಿವೇಶನದಲ್ಲಿ ಶಾಸಕರ ಅನುದಾನದಡಿ ಸಮುದಾಯ ಭವನ ನಿರ್ಮಿಸಲಾಗಿದೆ. ಕಲ್ಯಾಣ ಮಂಟಪ ನಿರ್ಮಿಸುವ ಉದ್ದೇಶವಿದೆ. ಭಮ್ಮಾಪುರ ಚಿಂದಿ ಓಣಿಯಲ್ಲಿದ್ದ ಸಾಲೇಶ್ವರ ದೇವಸ್ಥಾನವು ಮಳೆಯಿಂದ ಶಿಥಿಲಗೊಂಡಿದ್ದು, ನೆಲಸಮ ಮಾಡಲು ಪಾಲಿಕೆ ನೋಟಿಸ್ ನೀಡಿದೆ. ಹಾಗಾಗಿ ರಾಜೆಂದ್ರ ಕಾಲೊನಿಯ ಸಮುದಾಯ ಭವನದ ಆವರಣದಲ್ಲಿ ₹40 ಲಕ್ಷ ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಲಾಗುವುದು’ ಎಂದರು. ಸಮಾಜದ ಕಾರ್ಯದರ್ಶಿ ಅಮರೇಶ ನೂಲ್ವಿ, ವೀರಸಂಗಪ್ಪ ಭಾವಿ, ಬಸವರಾಜ ಚಟ್ಲಿ ಇದ್ದರು.