ವಿಸರ್ಜನೆ ಮಾಡುವಾಗ ಮೂರ್ತಿಗಳು ಯಾವ ರೀತಿ ಇದ್ದವೋ, ಈಗಲೂ ಹಾಗೆ ಇವೆ. ಇನ್ನೂ ಕೆಲವು ಮೂರ್ತಿಗಳನ್ನು ತಯಾರಿಸಲು ಬಳಸಿದ ಕಚ್ಚಾವಸ್ತುಗಳು ನೀರಿನ ಮೇಲೆ ತೇಲುತ್ತಿವೆ. ಕಟ್ಟಿಗೆ, ಹುಲ್ಲಿನಿಂದ ಮಾಡಿದ್ದ ಆಕೃತಿಗಳು ತೇಲಾಡುತ್ತಿವೆ. ಮೂರ್ತಿ ಬಿರುಕು ಬಿಡದಂತೆ ಎಚ್ಚರಿಕೆ ವಹಿಸಲು ಲಾಂಬಿ ಹಾಗೂ ಜಾಲಿ ಅಂಟು ಬಳಸುತ್ತಾರೆ. ಅದರ ಮೇಲೆ ಮಣ್ಣಿನ ಲೇಪನ ಮಾಡುತ್ತಾರೆ.