‘ಮೂರು ದಿನದ ಹಿಂದೆ ಸುರಿದ ಮಳೆಯಿಂದಾಗಿ ಖಾಲಿ ಜಾಗದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿತ್ತು. ಗಿಡಗಂಟಿ ಬೆಳೆದು, ಕೊಳಚೆ ನಿಂತಿದ್ದರಿಂದ ಹೆಚ್ಚು ಸೊಳ್ಳೆಗಳು ಬರುತ್ತಿದ್ದವು. ಹಾಗಾಗಿ, ಬೆಳಿಗ್ಗೆ ಕೆಲ ಸ್ಥಳೀಯರು ಜಾಗವನ್ನು ಸ್ವಚ್ಛಗೊಳಿಸಿ, ಮಣ್ಣನ್ನು ಎತ್ತಿ ಹಾಕುತ್ತಿದ್ದರು. ಆಗ ಚಪ್ಪಟೆಯಾಕಾರಾದ ಕಲ್ಲಿನಲ್ಲಿ ಕೆತ್ತಲಾಗಿರುವ ದೇವರ ಮೂರ್ತಿ ಸಿಕ್ಕಿತು’ ಎಂದು ಸ್ಥಳೀಯ ಎಸ್.ಎಸ್.ಕೆ ಸಮಾಜದ ಮುಖಂಡರಾದ ಸಿ.ಕೆ. ಪವಾರ ‘ಪ್ರಜಾವಾಣಿ’ಗೆ ತಿಳಿಸಿದರು.