ನೀರು ಸೋರಿಕೆಯಿಂದ ಕ್ರೀಡಾ ಕೇಂದ್ರ ಕಟ್ಟಡದ ಗೋಡೆ ಪಾಚಿಗಟ್ಟಿದೆ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಕಾಮಗಾರಿ ಪರಿಶೀಲನೆ ಬಾಕಿ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಸ್ಥಗಿತವಾಗಿರಬಹುದು. ನನಗೆ ಹೆಚ್ಚಿನ ಮಾಹಿತಿ ಇಲ್ಲ. ಕಾಮಗಾರಿ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಕೆಎಸ್ಸಿಎ ಅಧ್ಯಕ್ಷರನ್ನೇ ಕೇಳಬೇಕು
ನಿಖಿಲ್ ಭೂಸದ್ ನಿಮಂತ್ರಕ ಕೆಎಸ್ಸಿಎ ಧಾರವಾಡ ವಲಯ
‘ಸದಸ್ಯತ್ವ ನೋಂದಣಿ ಸ್ಥಗಿತ’
ಕ್ರೀಡಾ ಕೇಂದ್ರ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಸಹ ಸ್ಥಗಿತವಾಗಿದೆ. ಹುಬ್ಬಳ್ಳಿ ಬೆಳಗಾವಿ ಮತ್ತು ಬೆಂಗಳೂರು ಹೊರವಲಯದ ಆಲೂರು ಕ್ರೀಡಾಂಗಣದ ಕ್ರೀಡಾ ಕೇಂದ್ರಗಳಲ್ಲಿ ತಲಾ 250ರಂತೆ 750 ಜನರಿಗೆ ಸದಸ್ಯತ್ವ ನೀಡಲು ಉದ್ದೇಶಿಸಲಾಗಿತ್ತು. ಆಲೂರು ಕೇಂದ್ರದಲ್ಲಿ ಸದಸ್ಯತ್ವಕ್ಕೆ ₹10 ಲಕ್ಷ ಹುಬ್ಬಳ್ಳಿಯಲ್ಲಿ ₹5 ಲಕ್ಷ ಮತ್ತು ಬೆಳಗಾವಿಯಲ್ಲಿ ₹ 5 ಲಕ್ಷ ನಿಗದಿಪಡಿಸಲಾಗಿತ್ತು.