‘ಹುಬ್ಬಳ್ಳಿಯ ಮಹಾವೀರ್ ಎಂಬುವರಿಗಾಗಿ ಕೆಲ ತಿಂಗಳ ಹಿಂದೆ ಶಿವಕುಮಾರ ಸ್ವಾಮೀಜಿಯ ಪೇಂಟಿಂಗ್ ಮಾಡಿದ್ದೆ. ಅವರಿಗೆ ಪರಿಚಯವಿರುವ ಅಂಚೆ ಇಲಾಖೆಯ ಅಧಿಕಾರಿ ಅದನ್ನು ಅಂಚೆ ಇಲಾಖೆ ಹೊರತರಲು ಉದ್ದೇಶಿಸಿದ್ದ ವಿಶೇಷ ಲಕೋಟೆಗೆ ಬಳಸಲು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಬಳಿಕ, ನನ್ನನ್ನು ಸಂಪರ್ಕಿಸಿದಾಗ, ಸ್ವಾಮೀಜಿಯ ಜಲವರ್ಣದ ಪೇಂಟಿಂಗ್ ಬಿಡಿಸಿ ಕೊಟ್ಟೆ. ಮೂರು ತಿಂಗಳ ಬಳಿಕ, ಇಲಾಖೆಯ ಅನುಮೋದನೆ ಪಡೆದ ಪೇಟಿಂಗ್ ಕಡೆಗೂ ವಿಶೇಷ ಲಕೋಟೆ ಮೇಲೆ ಮುದ್ರಿತವಾಯಿತು. ಮೊದಲ ಬಾರಿಗೆ ಕಲಾವಿದರ ಹೆಸರನ್ನು ಲಕೋಟೆ ಮೇಲೆ ಮುದ್ರಿಸಿದ್ದಾರೆ. ಇದು ನನ್ನ ಕೆಲಸಕ್ಕೆ ದೊಡ್ಡ ಗೌರವ’ ಎಂದು ಸತೀಶಕುಮಾರ್ ಲಿಂಗಂ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.