ಹೆಣ್ಣು ಮಕ್ಕಳು ಪ್ರತಿವರ್ಷ ನೂಲು ಹುಣ್ಣಿಮೆಯಂದು ತವರಿಗೆ ಬರುತ್ತಾರೆ. ಅಂದು ಪೂಜೆ ನೆರವೇರಿಸಿ, ಅಣ್ಣ– ತಮ್ಮಂದಿರ ಬಲಗೈಗೆ ರಾಖಿಯನ್ನು ಕಟ್ಟಿ ಆರತಿ ಬೆಳಗುತ್ತಾರೆ. ಗ್ರಾಮೀಣ ಭಾಗದಲ್ಲಿ ಕಟ್ಟಿಗೆ ಮಣೆಯ ಮೇಲೆ ಸಹೋದರರನ್ನು ಕೂರಿಸುವ ಹೆಣ್ಣು ಮಕ್ಕಳು, ಅವರ ಹಣೆ ತೊಳೆದು ಕುಂಕುಮದ ತಿಲಕವನ್ನು ಹಚ್ಚುತ್ತಾರೆ. ಕಷ್ಟದಲ್ಲಿನಮ್ಮನ್ನು ಪೊರೆಯುತ್ತಾ ಬಂದ ಸಹೋದರರ ಬದುಕು ಸುಖವಾಗಿರಲಿ ಎಂದು ಹರಸಿ, ಅವರಿಗೆ ಸಿಹಿಯನ್ನು ತಿನ್ನಿಸುತ್ತಾರೆ.ಚಿಣ್ಣರಿಂದಿಡಿದು ದೊಡ್ಡವರವರೆಗೆ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.