ಇಂದೋರ್ ಪ್ರವಾಸಕ್ಕೆ ತಗುಲಿದ ಖರ್ಚಿನ ವಿವರ ಎರಡು ದಿನಗಳಲ್ಲಿ ಸಿಗಲಿದೆ. ಅವಳಿ ನಗರದಲ್ಲಿ ಸ್ವಚ್ಛತೆ ಸುಧಾರಣೆ ಬಗ್ಗೆ ತಿಳಿಯಲು ಇಂದೋರ್ ಪ್ರವಾಸಕ್ಕೆ ತೆರಳಿದ್ದೆವು. ಅದರ ಫಲಿತಾಂಶ ಶೀಘ್ರವೇ ಸಿಗಲಿದೆ.
ಜ್ಯೋತಿ ಪಾಟೀಲ ಮೇಯರ್
ಸ್ವಚ್ಛತೆ ಪಾಲಿಕೆ ಕೆಲಸ ಮಾತ್ರವಲ್ಲ. ಅದಕ್ಕೆ ಎಲ್ಲರ ಸಹಕಾರ ಅಗತ್ಯ. ಅಧ್ಯಯನ ಪ್ರವಾಸಕ್ಕೆ ಹೋದವರು ಇಲ್ಲಿಯೂ ಬದಲಾವಣೆ ತರುವ ಸಂಕಲ್ಪ ಮಾಡಿದ್ದಾರೆ. ಇದು ಉಪಯುಕ್ತ ಪ್ರವಾಸ
ರಾಮಪ್ಪ ಬಡಿಗೇರ ಸದಸ್ಯ
ಅವಳಿ ನಗರದಲ್ಲಿ ಸಮರ್ಪಕ ಸಾರ್ವಜನಿಕ ಶೌಚಾಲಯ ಇಲ್ಲ. ಶೌಚಾಲಯ ನಿರ್ಮಿಸಲು ಅಗದಷ್ಟು ಬಡತನ ಮಹಾನಗರ ಪಾಲಿಕೆಗಿದೆಯೇ? ಇಂದೋರ್ಗೆ ಹೋಗಿ ಏನು ಪ್ರಯೋಜನ