ಕೃತಿ ಪರಿಚಯಿಸಿದ ಪತ್ರಕರ್ತ ಸುಶೀಲೇಂದ್ರ ಕುಂದರಗಿ, ‘ಇರವಿನ ಅರಿವನ್ನು ಮರೆತಾಗ ಸಂವೇದನೆಯ ಅಭಿವ್ಯಕ್ತಿ ಕಾವ್ಯಕ್ಕೆ ಪ್ರೇರಣೆಯಾಗುತ್ತದೆ. ಕಾವ್ಯ ರಚಿಸುವುದಲ್ಲ, ಕಟ್ಟುವುದೂ ಅಲ್ಲ, ಅದು ಹುಟ್ಟುವುದೂ ಇಲ್ಲ, ಅದು ಆವಿರ್ಭವಿಸುತ್ತದೆ. ಪದಗಳ ಜೋಡಣೆ ಕಾವ್ಯವಲ್ಲ. ಅದಕ್ಕೆ ಋಷಿತ್ವ ಬೇಕು. ಅದನ್ನು ಜೇನ್ಗೊಡ ಸಂಕಲನದ ಕವಿತೆಗಳಲ್ಲಿ ಆಗಾಗ್ಗೆ ಕಾಣಬಹುದು’ ಎಂದರು.