ಹುಬ್ಬಳ್ಳಿ: ‘ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಮಾವೇಶ ಮಾ.18 ಹಾಗೂ 19ರಂದು ದಾವಣಗೆರೆಯ ಪಾರ್ವತಮ್ಮ ಶ್ಯಾಮನೂರ ಶಿವಶಂಕರಪ್ಪ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ’ ಎಂದು ಸಂಘಟನೆಯ ರಾಜ್ಯ ಸಂಚಾಲಕ ಫಕೀರಪ್ಪ ಮುಂಡಗೋಡ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯಕರ್ತರು ಭಾಗವಹಿಸಲಿದ್ದು, ಸಂಘಟನೆಯ ಮುಂದಿನ ಹೋರಾಟದ ಕುರಿತು ಚರ್ಚಿಸಲಾಗುವುದು. ಈ ಸಂದರ್ಭದಲ್ಲಿ ಹಲವು ವಿವಿಧ ದಲಿತ ಪರ ಸಂಘಟನೆಗಳು ಕರ್ನಾಟಕ ದಲಿತ ಸಂಘರ್ಷ ಸಮಿತಿಯೊಂದಿಗೆ ವಿಲೀನವಾಗಲಿವೆ’ ಎಂದು ಹೇಳಿದರು.
ಗಂಗಾಧರ ಪೇರೂರ, ಮೇಘರಾಜ ಹಿರೇಮನಿ, ವಿಜಯ ಗುಂಟ್ರಾಳ, ಲಕ್ಷ್ಮಣ ಇದ್ದರು.