<p><strong>ಕಲಘಟಗಿ:</strong> ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಸುಮಾರು ₹7.76 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆಶಾಸಕ ಸಿ.ಎಂ ನಿಂಬಣ್ಣವರ ಮತ್ತು ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿಭೂಮಿಪೂಜೆ ನೆರವೇರಿಸಿದರು.</p>.<p>ಬಳಿಕ ಮಾತನಾಡಿದ ಅವರು ‘ಕಾಮಗಾರಿಗಳನ್ನು ನಡೆಸುವಾಗ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಕೆಲಸ ವಿಳಂಬವಾಗಬಾರದು. ಅಧಿಕಾರಿಗಳು ಕೂಡ ಗಮನ ಹರಿಸಬೇಕು’ ಎಂದರು.</p>.<p>ಹಿರೇಹೊನ್ನಳ್ಳಿ ಗ್ರಾಮದಲ್ಲಿ ₹16 ಲಕ್ಷ ಅನುದಾನದಲ್ಲಿ ಅಂಗನವಾಡಿ ಕಟ್ಟಡ, ದುಮ್ಮವಾಡದಲ್ಲಿ ₹11 ಲಕ್ಷದಲ್ಲಿಪ್ರಾಥಮಿಕ ಶಾಲಾ ಕೊಠಡಿ, ₹50 ಲಕ್ಷದಲ್ಲಿ ಕಾಂಕ್ರೀಟ್ ರಸ್ತೆ, ₹1 ಕೋಟಿಯಲ್ಲಿಪಡುಬಿದ್ರಿ-ಚಿಕ್ಕಾಲುಗುಡ್ಡ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ, ₹4 ಕೋಟಿಯಲ್ಲಿಚಳಮಟ್ಟಿ- ಬಣದೂರ ರಸ್ತೆ ಸುಧಾರಣೆ, ಗುಡಿಹಾಳ ಗ್ರಾಮದಲ್ಲಿ ₹22 ಲಕ್ಷದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ, ₹60 ಲಕ್ಷ ವೆಚ್ಚದಲ್ಲಿಗಳಗಿ ಹುಲಕೊಪ್ಪ-ಕರ್ಲಕೊಪ್ಪ ರಸ್ತೆ ಸುಧಾರಣೆ, ₹22 ಲಕ್ಷದಲ್ಲಿ ಪ್ರಾಥಮಿಕ ಶಾಲಾ ಕಟ್ಟಡ, ₹11 ಲಕ್ಷ ಡಿಪಿಇಪಿ ಪ್ರಾಥಮಿಕ ಶಾಲೆ ಕೊಠಡಿ, ₹15.75 ಲಕ್ಷದಲ್ಲಿ ಸರ್ಕಾರಿ ಪ್ರೌಢಶಾಲೆ ಕೊಠಡಿ ನಿರ್ಮಾಣ, ₹16 ಲಕ್ಷದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ₹40 ಲಕ್ಷದಲ್ಲಿಹಸರಂಬಿ- ಗುಳೇದಕೊಪ್ಪ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದರು.</p>.<p>ತಾಲ್ಲೂಕು ಪಂಚಾಯ್ತಿಅಧ್ಯಕ್ಷೆ ಸುನೀತಾ ಮ್ಯಾಗಿನಮನಿ, ಸದಸ್ಯೆ ಮಂಜುಳಾ ಲಮಾಣಿ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಶೆರೇವಾಡ, ನರೇಶ ಮಲೆನಾಡು, ವಜ್ರಕುಮಾರ ಮಾದನಬಾವಿ, ನಿಂಗಪ್ಪ ಸುತಗಟ್ಟಿ, ಪಿಡಬ್ಲ್ಯೂಡಿ ಅಧಿಕಾರಿ ಬಸವರಾಜ ಬಾಗೇವಾಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಘಟಗಿ:</strong> ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಸುಮಾರು ₹7.76 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆಶಾಸಕ ಸಿ.ಎಂ ನಿಂಬಣ್ಣವರ ಮತ್ತು ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿಭೂಮಿಪೂಜೆ ನೆರವೇರಿಸಿದರು.</p>.<p>ಬಳಿಕ ಮಾತನಾಡಿದ ಅವರು ‘ಕಾಮಗಾರಿಗಳನ್ನು ನಡೆಸುವಾಗ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಕೆಲಸ ವಿಳಂಬವಾಗಬಾರದು. ಅಧಿಕಾರಿಗಳು ಕೂಡ ಗಮನ ಹರಿಸಬೇಕು’ ಎಂದರು.</p>.<p>ಹಿರೇಹೊನ್ನಳ್ಳಿ ಗ್ರಾಮದಲ್ಲಿ ₹16 ಲಕ್ಷ ಅನುದಾನದಲ್ಲಿ ಅಂಗನವಾಡಿ ಕಟ್ಟಡ, ದುಮ್ಮವಾಡದಲ್ಲಿ ₹11 ಲಕ್ಷದಲ್ಲಿಪ್ರಾಥಮಿಕ ಶಾಲಾ ಕೊಠಡಿ, ₹50 ಲಕ್ಷದಲ್ಲಿ ಕಾಂಕ್ರೀಟ್ ರಸ್ತೆ, ₹1 ಕೋಟಿಯಲ್ಲಿಪಡುಬಿದ್ರಿ-ಚಿಕ್ಕಾಲುಗುಡ್ಡ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ, ₹4 ಕೋಟಿಯಲ್ಲಿಚಳಮಟ್ಟಿ- ಬಣದೂರ ರಸ್ತೆ ಸುಧಾರಣೆ, ಗುಡಿಹಾಳ ಗ್ರಾಮದಲ್ಲಿ ₹22 ಲಕ್ಷದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ, ₹60 ಲಕ್ಷ ವೆಚ್ಚದಲ್ಲಿಗಳಗಿ ಹುಲಕೊಪ್ಪ-ಕರ್ಲಕೊಪ್ಪ ರಸ್ತೆ ಸುಧಾರಣೆ, ₹22 ಲಕ್ಷದಲ್ಲಿ ಪ್ರಾಥಮಿಕ ಶಾಲಾ ಕಟ್ಟಡ, ₹11 ಲಕ್ಷ ಡಿಪಿಇಪಿ ಪ್ರಾಥಮಿಕ ಶಾಲೆ ಕೊಠಡಿ, ₹15.75 ಲಕ್ಷದಲ್ಲಿ ಸರ್ಕಾರಿ ಪ್ರೌಢಶಾಲೆ ಕೊಠಡಿ ನಿರ್ಮಾಣ, ₹16 ಲಕ್ಷದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ₹40 ಲಕ್ಷದಲ್ಲಿಹಸರಂಬಿ- ಗುಳೇದಕೊಪ್ಪ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದರು.</p>.<p>ತಾಲ್ಲೂಕು ಪಂಚಾಯ್ತಿಅಧ್ಯಕ್ಷೆ ಸುನೀತಾ ಮ್ಯಾಗಿನಮನಿ, ಸದಸ್ಯೆ ಮಂಜುಳಾ ಲಮಾಣಿ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಶೆರೇವಾಡ, ನರೇಶ ಮಲೆನಾಡು, ವಜ್ರಕುಮಾರ ಮಾದನಬಾವಿ, ನಿಂಗಪ್ಪ ಸುತಗಟ್ಟಿ, ಪಿಡಬ್ಲ್ಯೂಡಿ ಅಧಿಕಾರಿ ಬಸವರಾಜ ಬಾಗೇವಾಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>