‘ಪ್ರಶ್ನಾವಳಿ ಮೂಲಕ ಮಕ್ಕಳ ಗಣಿತ ಸಾಮರ್ಥ್ಯ ಅಳೆಯುವುದಲ್ಲ. ಬದಲಾಗಿ ಮಕ್ಕಳ ವಿಷಯ, ಆಸಕ್ತಿ, ಏಕಾಗ್ರತೆ, ಪ್ರಾಥಮಿಕ ಸಂಗತಿಗಳ ಪರಿಣಾಮಕಾರಿ ಗ್ರಹಿಕೆ ನಿರ್ಧರಿಸಲು ಸಾಧ್ಯವಾಗುತ್ತದೆ.ಮಕ್ಕಳಿಗೆ ಗಣಿತ ವಿಷಯದತ್ತ ಆಸಕ್ತಿ ಮೂಡಿಸುವ, ಆ ಮೂಲಕ ಬಹುತೇಕ ಮಕ್ಕಳು ಕಠಿಣ ಎಂದುಕೊಂಡಿರುವ ವಿಷಯವನ್ನು ಸರಳ ಎನಿಸುವಂತೆ ಕಲಿಸುವ ಪ್ರಯತ್ನವೊಂದು ಅತ್ಯಂತ ಯಶಸ್ವಿಯಾಗಿದೆ. ವಾರದಿಂದ, ವಾರಕ್ಕೆ ಪಾಲಕರು ತಮ್ಮ ಮಕ್ಕಳೊಂದಿಗೆ ಕಾರ್ಯಾಗಾರಕ್ಕೆ ಹೆಚ್ಚು ಹೆಚ್ಚಾಗಿ ಹಾಜರಾಗುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ನಾಗಠಾಣ ಹೇಳಿದರು.