‘ಸ್ಮಾರ್ಟ್ ಸಿಟಿ, ವಿಮಾನ ನಿಲ್ದಾಣ ಅಭಿವೃದ್ಧಿ, ಕೇಂದ್ರ ರಸ್ತೆ ನಿಧಿಯಡಿ ರಸ್ತೆ ನಿರ್ಮಾಣ, ಬಿಆರ್ಟಿಎಸ್ ಸೇರಿದಂತೆ ಹಲವು ಯೋಜನೆಗಳು ಅವಳಿನಗರದಲ್ಲಿ ಕಾರ್ಯರೂಪಕ್ಕೆ ಬಂದಿವೆ. ದೊಡ್ಡ ಕೈಗಾರಿಕೆಗಳು ಸಹ ಬಂದಿವೆ. ಇದಕ್ಕೆ ಪೂರಕವಾಗಿ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.