‘ಹನ್ನೆರಡು ವರ್ಷಗಳ ಬಳಿಕ, ಜಿಲಾನಿ ಅವರು ತಮ್ಮ ಉತ್ತರಾಧಿಕಾರಿ ಹಜರತ್ ಸೈಯದ್ ಮೊಹಮ್ಮದ ಹಮ್ಝಾ ಅಶ್ರಫ್ ಅವರೊಂದಿಗೆ ಹುಬ್ಬಳ್ಳಿಗೆ ಬಂದಿದ್ದಾರೆ. ಸಹೋದರತೆ ಹಾಗೂ ಶೈಕ್ಷಣಿಕ ಕ್ರಾಂತಿಗಾಗಿ ಸ್ಥಾಪಿಸಿರುವ ಅಂತರರಾಷ್ಟ್ರೀಯ ಶೈಖುಲ್ ಇಸ್ಲಾಂ ಟ್ರಸ್ಟ್ ಹಾಗೂ ಮುಹದ್ದಿಸೇ ಆಝಮ್ ಮಿಷನ್ ಸಹಯೋಗದಲ್ಲಿ ಜಿಲಾನಿ ಅವರ ಪ್ರವಚನವನ್ನು ಜುಲೈ 31 ಹಾಗೂ ಆಗಸ್ಟ್ 1ರಂದು ಆಯೋಜಿಸಿ, ಸಾರ್ವನಿಕರಿಗೆ ಅವರ ಸಂದೇಶ ತಲುಪಿಸುವ ಕೆಲಸ ಮಾಡಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.