<p><strong>ನವಲಗುಂದ (ಧಾರವಾಡ ಜಿಲ್ಲೆ):</strong> ಪಟ್ಟಣದ ಗಾಂಧಿ ಮಾರುಕಟ್ಟೆಯ ಬೀದಿಬದಿ ವ್ಯಾಪಾರಸ್ಥರು ತ್ಯಾಜ್ಯ ವಿಲೇವಾರಿಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಪಾಠ ಕಲಿಸಲು ಮುಂದಾದ ನವಲಗುಂದ ಪುರಸಭೆ ಅಧಿಕಾರಿಗಳು, ಕೆಲ ಅಂಗಡಿಗಳ ಎದುರು ಸೋಮವಾರ ಟ್ರ್ಯಾಕ್ಟರ್ ಮೂಲಕ ತ್ಯಾಜ್ಯ ಸುರಿದಿದ್ದಾರೆ.</p>.<p>ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಆರೋಗ್ಯಾಧಿಕಾರಿ ಸಾವಿತ್ರಿ ಮುಷ್ಯಪ್ಪನವರ, ‘ನಿತ್ಯ ಎರಡು ಬಾರಿ ಕಸ ಸಂಗ್ರಹಣೆ ವಾಹನವು ಬಂದರೂ ಕೆಲವರು ಸಹಕರಿಸುತ್ತಿಲ್ಲ. ಕುಳಿತ ಜಾಗದ ಪಕ್ಕ ಅಥವಾ ರಸ್ತೆ ಮೇಲೆ ಕಸ ಎಸೆಯುತ್ತಾರೆ. ಅದಕ್ಕೆ ಅವರಿಗೆ ಪಾಠ ಕಲಿಸಲು ಈ ರೀತಿ ಮಾಡಲಾಗಿದೆ’ ಎಂದರು.</p>.<p>‘ಈ ಬಾರಿ ದಂಡ ವಿಧಿಸಿ, ಕ್ಷಮಾಪಣಾ ಪತ್ರ ಪಡೆದು ಕಸ ವಿಲೇವಾರಿ ಸಮರ್ಪಕ ರೀತಿ ಮಾಡುವಂತೆ ತಾಕೀತು ಮಾಡುತ್ತೇವೆ. ಪುನಃ ಇದೇ ತರಹ ಎಲ್ಲೆಂದರಲ್ಲಿ ಕಸ ಹಾಕಿದರೆ, ಕ್ರಮ ಜರುಗಿಸಲಾಗುವುದು’ ಎಂದರು.</p>.<p>‘ಯಾರೋ ಒಬ್ಬರು ರಸ್ತೆಯಲ್ಲಿ ಕಸ ಹಾಕುವುದರಿಂದ ಸಮಸ್ಯೆಯಾಗಿದೆ. ಅಂಥವರನ್ನು ನಿಖರವಾಗಿ ಗುರುತಿಸಿ ಪುರಸಭೆಯವರು ಕ್ರಮ ಕೈಗೊಳ್ಳಬೇಕು. ದಂಡ ವಿಧಿಸಿ, ತಾಕೀತು ಮಾಡಬೇಕು ‘ ಎಂದು ನವಲಗುಂದ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಿಯಾಜ ನಾಶಿಪುಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವಲಗುಂದ (ಧಾರವಾಡ ಜಿಲ್ಲೆ):</strong> ಪಟ್ಟಣದ ಗಾಂಧಿ ಮಾರುಕಟ್ಟೆಯ ಬೀದಿಬದಿ ವ್ಯಾಪಾರಸ್ಥರು ತ್ಯಾಜ್ಯ ವಿಲೇವಾರಿಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಪಾಠ ಕಲಿಸಲು ಮುಂದಾದ ನವಲಗುಂದ ಪುರಸಭೆ ಅಧಿಕಾರಿಗಳು, ಕೆಲ ಅಂಗಡಿಗಳ ಎದುರು ಸೋಮವಾರ ಟ್ರ್ಯಾಕ್ಟರ್ ಮೂಲಕ ತ್ಯಾಜ್ಯ ಸುರಿದಿದ್ದಾರೆ.</p>.<p>ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಆರೋಗ್ಯಾಧಿಕಾರಿ ಸಾವಿತ್ರಿ ಮುಷ್ಯಪ್ಪನವರ, ‘ನಿತ್ಯ ಎರಡು ಬಾರಿ ಕಸ ಸಂಗ್ರಹಣೆ ವಾಹನವು ಬಂದರೂ ಕೆಲವರು ಸಹಕರಿಸುತ್ತಿಲ್ಲ. ಕುಳಿತ ಜಾಗದ ಪಕ್ಕ ಅಥವಾ ರಸ್ತೆ ಮೇಲೆ ಕಸ ಎಸೆಯುತ್ತಾರೆ. ಅದಕ್ಕೆ ಅವರಿಗೆ ಪಾಠ ಕಲಿಸಲು ಈ ರೀತಿ ಮಾಡಲಾಗಿದೆ’ ಎಂದರು.</p>.<p>‘ಈ ಬಾರಿ ದಂಡ ವಿಧಿಸಿ, ಕ್ಷಮಾಪಣಾ ಪತ್ರ ಪಡೆದು ಕಸ ವಿಲೇವಾರಿ ಸಮರ್ಪಕ ರೀತಿ ಮಾಡುವಂತೆ ತಾಕೀತು ಮಾಡುತ್ತೇವೆ. ಪುನಃ ಇದೇ ತರಹ ಎಲ್ಲೆಂದರಲ್ಲಿ ಕಸ ಹಾಕಿದರೆ, ಕ್ರಮ ಜರುಗಿಸಲಾಗುವುದು’ ಎಂದರು.</p>.<p>‘ಯಾರೋ ಒಬ್ಬರು ರಸ್ತೆಯಲ್ಲಿ ಕಸ ಹಾಕುವುದರಿಂದ ಸಮಸ್ಯೆಯಾಗಿದೆ. ಅಂಥವರನ್ನು ನಿಖರವಾಗಿ ಗುರುತಿಸಿ ಪುರಸಭೆಯವರು ಕ್ರಮ ಕೈಗೊಳ್ಳಬೇಕು. ದಂಡ ವಿಧಿಸಿ, ತಾಕೀತು ಮಾಡಬೇಕು ‘ ಎಂದು ನವಲಗುಂದ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಿಯಾಜ ನಾಶಿಪುಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>