ಸಂದೇಶದಲ್ಲಿ ಏನಿದೆ?: ‘ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳಲ್ಲಿ ಜ. 22ರಂದು ವಿಶೇಷಪೂಜೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಾಣಿಕೆ ಡಬ್ಬಿಯಲ್ಲಿ ಅಧಿಕ ಹಣ ಸಂಗ್ರಹವಾಗಬೇಕು, ಅದನ್ನು ಲೋಕಸಭೆ ಚುನಾವಣೆಗೆ ಹಾಗೂ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುವ ತಂತ್ರವಾಗಿದೆ. ನಮ್ಮ ಹಣವನ್ನು ಇವರು ಬೇರೆ ಧರ್ಮದವರಿಗೆ ಕೊಡುವ ಹಾಗೂ ಚುನಾವಣೆಗೆ ಬಳಸಿಕೊಳ್ಳುವ ದರಿದ್ರ ಸರ್ಕಾರದ ತಂತ್ರಕ್ಕೆ ಬಲಿಯಾಗಬೇಡಿ. ಧರ್ಮವನ್ನು ರಕ್ಷಿಸಿ, ಮೋಸದ ರಾಜಕೀಯಕ್ಕೆ ಬಲಿಯಾಗಬೇಡಿ’ ಎನ್ನುವ ಸಂದೇಶ ಹಂಚಿಕೆ ಮಾಡಿದ್ದಾರೆ.