‘ಪ್ರವೀಣ್ ಪೂಜಾರಿ, ಮಲ್ಲಯ್ಯ ಹಿರೇಮಠ ಮತ್ತು ವಿನೋದ ಪಾಟೀಲ ಎಂಬುವರು ರಸ್ತೆ ಮೇಲೆ ಬೈದಾಡಿಕೊಂಡು, ಜಗಳವಾಡುತ್ತಿದ್ದರು. ಘಟನಾ ಸ್ಥಳಕ್ಕೆ ತೆರಳಿದಾಗ ವಿನೋದ ಪಾಟೀಲ ಠಾಣೆಯ ಬೆಂಗಾವಲು ಸಿಬ್ಬಂದಿಯನ್ನು ನೂಕಿ ಓಡಿಹೋಗಿದ್ದು, ಉಳಿದ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕರ್ತವ್ಯ ನಿರತ ಪೊಲೀಸರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ದೂರು ದಾಖಲಿಸಲಾಗಿದೆ’ ಎಂದು ಪ್ರಭು ಸೂರಿನ್ ತಿಳಿಸಿದರು.