ನಂತರ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಕುಮಾರ.ಎಂ ಮಾತನಾಡಿ ‘ಈ ಮಕ್ಕಳಿಗೆ ದೃಷ್ಟಿದೋಷವಿದ್ದು, ಶಸ್ತ್ರಚಿಕಿತ್ಸೆಯಿಂದ ಕಣ್ಣಿನ ದೃಷ್ಟಿ ಬರುವುದಾದರೆ ನಮ್ಮ ಇಲಾಖೆಯಿಂದಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗುವುದು. ಕುಟುಂಬದವರಿಗೆ ಮಕ್ಕಳ ಆರೈಕೆ ಕಷ್ಟವಾದರೆ 'ಮಕ್ಕಳ ಪಾಲನಾಗೃಹ'ಕ್ಕೆ ಸೇರಿಸಲು ಕ್ರಮ ಕೈಗೊಳ್ಳುತ್ತೇನೆ‘ ಎಂದು ತಿಳಿಸಿದರು.