ಸೋಂಕಿನ ಸಾಮಾನ್ಯ ಲಕ್ಷಣ ಹೊಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ. ಮನೆಯಲ್ಲಿ ಉಪಚರಿಸಿ ಎಂದು ಹಲವು ಶಾಲೆಗಳ ಮುಖ್ಯ ಶಿಕ್ಷಕರು ಪೋಷಕರಿಗೆ ತಿಳಿಸಿದ್ದರು. ಆದ್ದರಿಂದ ಹುಬ್ಬಳ್ಳಿ ನಗರದಲ್ಲಿ ಶೇ 50ರಿಂದ ಶೇ 60ರಷ್ಟು ಮಕ್ಕಳಷ್ಟೇ ಶಾಲೆಗೆ ಬಂದಿದ್ದರು. ಧಾರವಾಡ ನಗರದಲ್ಲಿಯೂ ಇದೇ ಸ್ಥಿತಿಯಿತ್ತು. ಶಾಲಾ ಸಿಬ್ಬಂದಿ ಮೊದಲಿಗಿಂತಲೂ ಹೆಚ್ಚು ಕಾಳಜಿ ವಹಿಸಿ ಕೋವಿಡ್ ನಿಯಮ ಪಾಲನೆಗೆ ಒತ್ತು ಕೊಟ್ಟಿದ್ದು ಕಂಡು ಬಂತು.