<p><strong>ಹುಬ್ಬಳ್ಳಿ: </strong>ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ವತಿಯಿಂದ ಹುಬ್ಬಳ್ಳಿಯ ಜೆಸಿ ನಗರದ ಲಕ್ಷ್ಮಿಸದನದಲ್ಲಿ ಮರೆತುಹೋದ ಆಹಾರಗಳ ಮೇಳ ಆಯೋಜಿಸಲಾಗಿದೆ.</p>.<p>ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೃಷ್ಣಮೂರ್ತಿ ಬಿಳಿಗೆರೆ, ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮೇಳಕ್ಕೆ ಚಾಲನೆ ನೀಡಿದರು.</p>.<p>ಜುಲೈ 16 ಮತ್ತು17 ರಂದು ಮೇಳ ನಡೆಯಲಿದೆ. ಮೇಳದಲ್ಲಿ 22 ಮಳಿಗೆಗಳನ್ನು ಹಾಕಲಾಗಿದೆ.</p>.<p>ಕಪ್ಪು ಸಾಮೆ, ಕೊರಲೆ ಅಕ್ಕಿ, ಬರಗು, ಊದಲು, ನವಣೆ, ಸಜ್ಜೆ, ಕಪ್ಪು ಹೆಸರು, ಹುರುಳಿ, ಸಾವೆ, ಗದ್ದೆ ಅವರೆ, ಚಂದ್ರ ನವಣೆ ಸೇರಿದಂತೆ ಇನ್ನಿತರ ಸಿರಿಧಾನ್ಯಗಳು ಮೇಳದಲ್ಲಿ ಲಭ್ಯ ಇವೆ.</p>.<p>ಸಿರಿಧಾನ್ಯಗಳಿಂದ ತಯಾರಿಸಿದ ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಉಂಡಿ ಸೇರಿದಂತೆ ಇತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.</p>.<p>ತುಮಕೂರಿನ ಸಿದ್ದು ಹಲಸಿನ ಸಸಿಗಳು, ಹಣ್ಣಗಳು, ಹಲಸಿನ ಹಣ್ಣಿನ ಉತ್ಪನ್ನಗಳನ್ನು ಮೇಳದಲ್ಲಿ ಮಾರಾಟಕ್ಕೆ ಇಡಲಾಗಿದೆ.</p>.<p>ಶನಿವಾರ ಸಂಜೆ ಮರೆತು ಹೋದ ಅಹಾರಗಳ ಅಡುಗೆ ಸ್ಪರ್ಧೆ, ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ನಡೆಯಲಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ವತಿಯಿಂದ ಹುಬ್ಬಳ್ಳಿಯ ಜೆಸಿ ನಗರದ ಲಕ್ಷ್ಮಿಸದನದಲ್ಲಿ ಮರೆತುಹೋದ ಆಹಾರಗಳ ಮೇಳ ಆಯೋಜಿಸಲಾಗಿದೆ.</p>.<p>ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೃಷ್ಣಮೂರ್ತಿ ಬಿಳಿಗೆರೆ, ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮೇಳಕ್ಕೆ ಚಾಲನೆ ನೀಡಿದರು.</p>.<p>ಜುಲೈ 16 ಮತ್ತು17 ರಂದು ಮೇಳ ನಡೆಯಲಿದೆ. ಮೇಳದಲ್ಲಿ 22 ಮಳಿಗೆಗಳನ್ನು ಹಾಕಲಾಗಿದೆ.</p>.<p>ಕಪ್ಪು ಸಾಮೆ, ಕೊರಲೆ ಅಕ್ಕಿ, ಬರಗು, ಊದಲು, ನವಣೆ, ಸಜ್ಜೆ, ಕಪ್ಪು ಹೆಸರು, ಹುರುಳಿ, ಸಾವೆ, ಗದ್ದೆ ಅವರೆ, ಚಂದ್ರ ನವಣೆ ಸೇರಿದಂತೆ ಇನ್ನಿತರ ಸಿರಿಧಾನ್ಯಗಳು ಮೇಳದಲ್ಲಿ ಲಭ್ಯ ಇವೆ.</p>.<p>ಸಿರಿಧಾನ್ಯಗಳಿಂದ ತಯಾರಿಸಿದ ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಉಂಡಿ ಸೇರಿದಂತೆ ಇತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.</p>.<p>ತುಮಕೂರಿನ ಸಿದ್ದು ಹಲಸಿನ ಸಸಿಗಳು, ಹಣ್ಣಗಳು, ಹಲಸಿನ ಹಣ್ಣಿನ ಉತ್ಪನ್ನಗಳನ್ನು ಮೇಳದಲ್ಲಿ ಮಾರಾಟಕ್ಕೆ ಇಡಲಾಗಿದೆ.</p>.<p>ಶನಿವಾರ ಸಂಜೆ ಮರೆತು ಹೋದ ಅಹಾರಗಳ ಅಡುಗೆ ಸ್ಪರ್ಧೆ, ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ನಡೆಯಲಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>