ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ​​​​​​​ಮರೆತುಹೋದ ಆಹಾರಗಳ ಮೇಳಕ್ಕೆ ಚಾಲನೆ

Last Updated 16 ಜುಲೈ 2022, 8:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ವತಿಯಿಂದ ಹುಬ್ಬಳ್ಳಿಯ ಜೆಸಿ ನಗರದ ಲಕ್ಷ್ಮಿ‌ಸದನದಲ್ಲಿ ಮರೆತುಹೋದ‌ ಆಹಾರಗಳ ಮೇಳ ಆಯೋಜಿಸಲಾಗಿದೆ‌.

ಕಾಲೇಜು ಶಿಕ್ಷಣ ಇಲಾಖೆ ಜಂಟಿ‌ ನಿರ್ದೇಶಕ ಡಾ.ಕೃಷ್ಣಮೂರ್ತಿ ಬಿಳಿಗೆರೆ, ಹುಬ್ಬಳ್ಳಿಯ ಮೂರು ಸಾವಿರ‌ ಮಠದ ಗುರುಸಿದ್ಧರಾಜಯೋಗೀಂದ್ರ‌ ಸ್ವಾಮೀಜಿ ಮೇಳಕ್ಕೆ‌ ಚಾಲನೆ ನೀಡಿದರು.

ಜುಲೈ 16 ಮತ್ತು17 ರಂದು ಮೇಳ ನಡೆಯಲಿದೆ. ಮೇಳದಲ್ಲಿ 22 ಮಳಿಗೆಗಳನ್ನು ಹಾಕಲಾಗಿದೆ.

ಕಪ್ಪು ಸಾಮೆ, ಕೊರಲೆ ಅಕ್ಕಿ, ಬರಗು, ಊದಲು, ನವಣೆ, ಸಜ್ಜೆ, ಕಪ್ಪು ಹೆಸರು, ಹುರುಳಿ, ಸಾವೆ, ಗದ್ದೆ ಅವರೆ, ಚಂದ್ರ‌ ನವಣೆ ಸೇರಿದಂತೆ‌ ಇನ್ನಿತರ ಸಿರಿಧಾನ್ಯಗಳು ಮೇಳದಲ್ಲಿ ಲಭ್ಯ ಇವೆ.

ಸಿರಿಧಾನ್ಯಗಳಿಂದ ತಯಾರಿಸಿದ ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಉಂಡಿ ಸೇರಿದಂತೆ ಇತರ ಉತ್ಪನ್ನಗಳ ಪ್ರದರ್ಶನ‌ ಮತ್ತು ಮಾರಾಟಕ್ಕೆ‌ ವ್ಯವಸ್ಥೆ ಮಾಡಲಾಗಿದೆ.

ತುಮಕೂರಿನ‌ ಸಿದ್ದು ಹಲಸಿನ ಸಸಿಗಳು, ಹಣ್ಣಗಳು, ಹಲಸಿನ‌ ಹಣ್ಣಿನ ಉತ್ಪನ್ನಗಳನ್ನು ಮೇಳದಲ್ಲಿ ಮಾರಾಟಕ್ಕೆ‌‌ ಇಡಲಾಗಿದೆ.

ಶನಿವಾರ‌‌ ಸಂಜೆ ಮರೆತು ಹೋದ ಅಹಾರಗಳ ಅಡುಗೆ ಸ್ಪರ್ಧೆ, ಹಲಸಿನ ಹಣ್ಣು ತಿನ್ನುವ ಸ್ಪರ್ಧೆ‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT