ಪ್ರವಾಹ ಬಂದಾಗ ಒಟ್ಟು 75 ಅಂಧ ವಿದ್ಯಾರ್ಥಿಗಳು ಜ್ಞಾನ ಸಿಂಧು ಶಾಲೆಯಲ್ಲಿದ್ದರು. ಅದರಲ್ಲಿ 22 ಬಾಲಕ ಮತ್ತು 29 ಬಾಲಕಿಯರಿಗೆ ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ವಸತಿ ಕಲ್ಪಿಸಲಾಗಿತ್ತು. ಉಳಿದವರು ತಮ್ಮೂರಿಗೆ ಹೋಗಿದ್ದರು. ಈ ಕುರಿತು ಪ್ರಜಾವಾಣಿ ಬುಧವಾರ ‘ಪ್ರವಾಹ; ಅಂಧ ಮಕ್ಕಳ ಬದುಕು ಬೀದಿಗೆ’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಗದಗ ಹಾಗೂ ಧಾರವಾಡ ಅಂಗವಿಕಲರ ಇಲಾಖೆಯ ಅಧಿಕಾರಿಗಳು ಮಕ್ಕಳನ್ನು ಸ್ಥಳಾಂತರಿಸಿದರು.