<p><strong>ಅಳ್ನಾವರ:</strong> ವೇಗವಾಗಿ ಬೆಳೆಯುತ್ತಿರುವ ಪಟ್ಟಣದ ಜನರ ಮಹಾದಾಸೆ ಈಡೇರಿಸಲು ಹಾಗೂ ನಾಗರಿಕ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಾಣುವ ಹಂಬಲ ಮತ್ತು ಹಣಕಾಸಿನ ಸೂಕ್ತ, ಸಮರ್ಥ ನಿರ್ವಹಣೆಗೆ ಆದ್ಯತೆ ನೀಡುವ ಮೂಲಕ ₹3.60 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಪ್ರಭಾರಿ ತಹಶೀಲ್ದಾರ್ ಡಿ.ಎಚ್. ಹೂಗಾರ ತಿಳಿಸಿದರು.</p>.<p>ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಗ್ರಹದಲ್ಲಿ ಬುಧವಾರ ನಡೆದ 2026-27ನೇ ಸಾಲಿನ ಆಯ-ವ್ಯಯ ಮಂಡನಾ ಸಭೆಯಲ್ಲಿ ಸಿದ್ದ ಪಡಿಸಿದ ಬಜೆಟ್ ಪ್ರತಿಯನ್ನು ಅವರು ಓದಿ, ಒಟ್ಟು ₹19.96 ಕೋಟಿ ಜಮೆ ನಿರೀಕ್ಷೆ ಇದ್ದು, ₹19.93 ಕೋಟಿ ಖರ್ಚು ಅಂದಾಜಿಸಲಾಗಿದೆ ಎಂದರು.</p>.<p>ಸ್ವಂತ ಆದಾಯದ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕಂದಾಯ, ಅಭಿವೃದ್ಧಿ ಶುಲ್ಕ, ಮಳಿಗೆ ಬಾಡಿಗೆಯಿಂದ ಹೆಚ್ಚಿನ ಆದಾಯ ನಿರೀಕ್ಷೆ ಇದೆ. ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೆ ಕ್ರಮಕ್ಕಾಗಿ ಸ್ವಂತ ಮೂಲಗಳಿಂದ ಆದಾಯ ಸಂಗ್ರಹಿಸುವ ಗುರಿ ಇದೆ ಎಂದರು.</p>.<p>ರಾಜ್ಯ ಹಣಕಾಸು ಯೋಜನೆಯಡಿ ₹50 ಲಕ್ಷ, ಮುಕ್ತ ನಿಧಿ ಅನುದಾನ ₹2 ಕೋಟಿ, ಎಸ್ಎಫ್ಸಿ ಕುಡಿಯುವ ನೀರಿನ ಅನುದಾನ ₹50 ಲಕ್ಷ ಸೇರಿ ಒಟ್ಟು ₹7.40 ಕೋಟಿ ರಾಜಸ್ವ ಅನುದಾನ ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಕೇಂದ್ರ ಹಣಕಾಸು ಆಯೋಗದಿಂದ 15 ಮತ್ತು 16 ನೇ ಹಣಕಾಸು ಯೋಜನೆಯಡಿ ಬರುವ ಅಂದಾಜು ₹1 ಕೋಟಿ <br> ಅನುದಾನವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.</p>.<p><strong>ವೆಚ್ಚದ ವಿವರ</strong>: ಕಚೇರಿ ವೆಚ್ಚ ₹76.5 ಲಕ್ಷ, ಹೊರಗುತ್ತಿಗೆ ನೀರು ಸರಬರಾಜು ಸಿಬ್ಬಂದಿ ವೇತನ ₹2.50 ಲಕ್ಷ, ಎಸ್ಡಬ್ಲೂಎಂ ಸೈಟನ್ ಹೊರಗುತ್ತಿಗೆ ಲೇಬರ ವೆಚ್ಚ <br> ₹52 ಲಕ್ಷ, ಜಾಕವೆಲ್ ವಿದ್ಯುತ್ ನಿರ್ವಹಣೆಗೆ ₹120 ಲಕ್ಷ . ಹಳಿಯಾಳ ಜಾಕವೆಲ್ ಜಾಗೆ ಲೀಸ್ ಪಾವತಿಗೆ ₹2.50 ಲಕ್ಷ, ಬೀದಿ ದೀಪಗಳ ನಿರ್ವಹಣೆಗೆ ₹12 ಲಕ್ಷ, ನೀರು ಸರಬರಾಜು ಮತ್ತು ವಾರ್ಷಿಕ ನಿರ್ವಹಣೆಗೆ ₹135 ಲಕ್ಷ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.</p>.<p><strong>ಮೂಲ ಸೌಕರ್ಯಗಳು:</strong> ರಸ್ತೆ ನಿರ್ಮಾಣಕ್ಕೆ ₹45 ಲಕ್ಷ, ಚರಂಡಿ ನಿರ್ಮಾಣಕ್ಕೆ ₹50 ಲಕ್ಷ, ಮಳೆ ನೀರು ಚರಂಡಿ ರಸ್ತೆ ನಿರ್ಮಾಣಕ್ಕೆ ₹35 ಲಕ್ಷ, ಶೌಚಾಲಯ ಮತ್ತು ಪಟ್ಟಣದ ನೈರ್ಮಲೀಕರಣ ನಿರ್ವಹಣೆಗೆ ₹6 ಲಕ್ಷ. ಕಟ್ಟಡ ನಿರ್ಮಾಣಕ್ಕೆ ₹ 315 ಲಕ್ಷಗಳ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಜೊತೆಗೆ ಪಟ್ಟಣದ ಎಲ್ಲ ಕೆರೆಗಳ ಅಭಿವೃದ್ದಿ ಮತ್ತು ಪುನರಚೇತನಕ್ಕಾಗಿ ಅಮೃತ 2.0 ಯೋಜನೆಯಡಿ ₹3 ಕೋಟಿ ಅಂದಾಜು ಅನುದಾನ ನೀರಿಕ್ಷೆ ಇದೆ ಎಂದರು.</p>.<p>ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು, ನಾಗರಾಜ ಗುರ್ಲಹುಸೂರು, ಅಕೌಂಟಂಟ ಸಾವಿತ್ರಿ ಹವಗಿ. ಎಂ.ಎಸ್. ಬೆಂತೂರ, ಪ್ರವೀಣ ದೊಡ್ಡಮನಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳ್ನಾವರ:</strong> ವೇಗವಾಗಿ ಬೆಳೆಯುತ್ತಿರುವ ಪಟ್ಟಣದ ಜನರ ಮಹಾದಾಸೆ ಈಡೇರಿಸಲು ಹಾಗೂ ನಾಗರಿಕ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಾಣುವ ಹಂಬಲ ಮತ್ತು ಹಣಕಾಸಿನ ಸೂಕ್ತ, ಸಮರ್ಥ ನಿರ್ವಹಣೆಗೆ ಆದ್ಯತೆ ನೀಡುವ ಮೂಲಕ ₹3.60 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಪ್ರಭಾರಿ ತಹಶೀಲ್ದಾರ್ ಡಿ.ಎಚ್. ಹೂಗಾರ ತಿಳಿಸಿದರು.</p>.<p>ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಗ್ರಹದಲ್ಲಿ ಬುಧವಾರ ನಡೆದ 2026-27ನೇ ಸಾಲಿನ ಆಯ-ವ್ಯಯ ಮಂಡನಾ ಸಭೆಯಲ್ಲಿ ಸಿದ್ದ ಪಡಿಸಿದ ಬಜೆಟ್ ಪ್ರತಿಯನ್ನು ಅವರು ಓದಿ, ಒಟ್ಟು ₹19.96 ಕೋಟಿ ಜಮೆ ನಿರೀಕ್ಷೆ ಇದ್ದು, ₹19.93 ಕೋಟಿ ಖರ್ಚು ಅಂದಾಜಿಸಲಾಗಿದೆ ಎಂದರು.</p>.<p>ಸ್ವಂತ ಆದಾಯದ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕಂದಾಯ, ಅಭಿವೃದ್ಧಿ ಶುಲ್ಕ, ಮಳಿಗೆ ಬಾಡಿಗೆಯಿಂದ ಹೆಚ್ಚಿನ ಆದಾಯ ನಿರೀಕ್ಷೆ ಇದೆ. ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೆ ಕ್ರಮಕ್ಕಾಗಿ ಸ್ವಂತ ಮೂಲಗಳಿಂದ ಆದಾಯ ಸಂಗ್ರಹಿಸುವ ಗುರಿ ಇದೆ ಎಂದರು.</p>.<p>ರಾಜ್ಯ ಹಣಕಾಸು ಯೋಜನೆಯಡಿ ₹50 ಲಕ್ಷ, ಮುಕ್ತ ನಿಧಿ ಅನುದಾನ ₹2 ಕೋಟಿ, ಎಸ್ಎಫ್ಸಿ ಕುಡಿಯುವ ನೀರಿನ ಅನುದಾನ ₹50 ಲಕ್ಷ ಸೇರಿ ಒಟ್ಟು ₹7.40 ಕೋಟಿ ರಾಜಸ್ವ ಅನುದಾನ ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಕೇಂದ್ರ ಹಣಕಾಸು ಆಯೋಗದಿಂದ 15 ಮತ್ತು 16 ನೇ ಹಣಕಾಸು ಯೋಜನೆಯಡಿ ಬರುವ ಅಂದಾಜು ₹1 ಕೋಟಿ <br> ಅನುದಾನವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.</p>.<p><strong>ವೆಚ್ಚದ ವಿವರ</strong>: ಕಚೇರಿ ವೆಚ್ಚ ₹76.5 ಲಕ್ಷ, ಹೊರಗುತ್ತಿಗೆ ನೀರು ಸರಬರಾಜು ಸಿಬ್ಬಂದಿ ವೇತನ ₹2.50 ಲಕ್ಷ, ಎಸ್ಡಬ್ಲೂಎಂ ಸೈಟನ್ ಹೊರಗುತ್ತಿಗೆ ಲೇಬರ ವೆಚ್ಚ <br> ₹52 ಲಕ್ಷ, ಜಾಕವೆಲ್ ವಿದ್ಯುತ್ ನಿರ್ವಹಣೆಗೆ ₹120 ಲಕ್ಷ . ಹಳಿಯಾಳ ಜಾಕವೆಲ್ ಜಾಗೆ ಲೀಸ್ ಪಾವತಿಗೆ ₹2.50 ಲಕ್ಷ, ಬೀದಿ ದೀಪಗಳ ನಿರ್ವಹಣೆಗೆ ₹12 ಲಕ್ಷ, ನೀರು ಸರಬರಾಜು ಮತ್ತು ವಾರ್ಷಿಕ ನಿರ್ವಹಣೆಗೆ ₹135 ಲಕ್ಷ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.</p>.<p><strong>ಮೂಲ ಸೌಕರ್ಯಗಳು:</strong> ರಸ್ತೆ ನಿರ್ಮಾಣಕ್ಕೆ ₹45 ಲಕ್ಷ, ಚರಂಡಿ ನಿರ್ಮಾಣಕ್ಕೆ ₹50 ಲಕ್ಷ, ಮಳೆ ನೀರು ಚರಂಡಿ ರಸ್ತೆ ನಿರ್ಮಾಣಕ್ಕೆ ₹35 ಲಕ್ಷ, ಶೌಚಾಲಯ ಮತ್ತು ಪಟ್ಟಣದ ನೈರ್ಮಲೀಕರಣ ನಿರ್ವಹಣೆಗೆ ₹6 ಲಕ್ಷ. ಕಟ್ಟಡ ನಿರ್ಮಾಣಕ್ಕೆ ₹ 315 ಲಕ್ಷಗಳ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಜೊತೆಗೆ ಪಟ್ಟಣದ ಎಲ್ಲ ಕೆರೆಗಳ ಅಭಿವೃದ್ದಿ ಮತ್ತು ಪುನರಚೇತನಕ್ಕಾಗಿ ಅಮೃತ 2.0 ಯೋಜನೆಯಡಿ ₹3 ಕೋಟಿ ಅಂದಾಜು ಅನುದಾನ ನೀರಿಕ್ಷೆ ಇದೆ ಎಂದರು.</p>.<p>ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು, ನಾಗರಾಜ ಗುರ್ಲಹುಸೂರು, ಅಕೌಂಟಂಟ ಸಾವಿತ್ರಿ ಹವಗಿ. ಎಂ.ಎಸ್. ಬೆಂತೂರ, ಪ್ರವೀಣ ದೊಡ್ಡಮನಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>