‘ಕೃಷಿ ವಿಶ್ವವಿದ್ಯಾಲಯದಲ್ಲಿರುವ ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರನ್ನು ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮಗಳ ಉಸ್ತುವಾರಿ ನೀಡಿ ರೈತರೊಂದಿಗೆ ನೇರ ಸಂಪರ್ಕದಲ್ಲಿರುವಂತೆ ಮಾಡಲು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸೂಚಿಸಲಾಗಿದೆ. ಅದರಂತೆಯೇ ಕೊಪ್ಪಳದಲ್ಲಿ ಜಾರಿಗೆ ತಂದಿರುವ ‘ಕೃಷಿ ಸಂಜೀವಿನಿ’ ಎಂಬ ಸಂಚಾರಿ ಪ್ರಯೋಗಾಲಯ ಹಾಗೂ ಕೃಷಿಕರಿಗೆ ಸ್ವಾಭಿಮಾನಿ ರೈತರ ಕಾರ್ಡ್ ನೀಡುವ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಕುರಿತು ಚಿಂತನೆ ನಡೆದಿದೆ’ ಎಂದು ಹೇಳಿದರು.