ಹುಬ್ಬಳ್ಳಿ: ‘ನಾ ಏನೂ ಮಾತಾಡಲ್ಲ. ಏನ್ ಧಮ್ಕಿ ಹಾಕ್ತೀರಾ, ದಾದಾಗಿರಿ ಮಾಡ್ತೀರಾ...’ – ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ತಮ್ಮನ್ನು ಮುತ್ತಿಕೊಂಡ ಪತ್ರಕರ್ತರ ವಿರುದ್ಧ ಶಾಸಕ ರಮೇಶ ಜಾರಕಿಹೊಳಿ ಕಿಡಿಕಾರಿದ್ದು ಹೀಗೆ.
ರಮೇಶ ಅವರು ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ಹೋಗಲಿದ್ದಾರೆ ಎಂಬ ಮಾಹಿತಿ ಮೇರೆಗೆ, ಪತ್ರಕರ್ತರು ಅವರನ್ನು ಮಾತನಾಡಿಸಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ನಿಲ್ದಾಣದಿಂದ ಹೊರಕ್ಕೆ ಬರುತ್ತಲೇ ತಮ್ಮನ್ನು ಮುತ್ತಿಕೊಂಡು, ಪ್ರಶ್ನೆಗಳನ್ನು ಕೇಳಿದ ಪತ್ರಕರ್ತರ ವಿರುದ್ಧ ಸಿಡಿಮಿಡಿಗೊಂಡರು.