ಉಪವಿಭಾಗಾಧಿಕಾರಿ ಡಾ.ಮಾಧವ ಗಿತ್ತೆ, ತಹಶೀಲ್ದಾರ್ ಮಂಜುನಾಥ ಅಮಾಸಿ, ತಾಲ್ಲೂಕು ಆಹಾರ ನಿರೀಕ್ಷಕ ಟಿ.ಎಲ್.ಮುತ್ತಣ್ಣವರ ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ವಶಪಡಿಸಿಕೊಂಡ360 ಕ್ವಿಂಟಾಲ್ ಅಕ್ಕಿಯನ್ನು ಜಿಲ್ಲಾ ಆಹಾರ ಉಗ್ರಾಣ ನಿಗಮಕ್ಕೆ ಸಾಗಿಸಲಾಯಿತು. ಇದಕ್ಕೆ ಬಳಸಲಾದ ವಾಹನಗಳನ್ನು ಸ್ಥಳೀಯ ಪೊಲೀಸ್ ವಶಕ್ಕೆ ನೀಡಿ ಪ್ರಕರಣ ದಾಖಲಿಸಲಾಯಿತು. ತನಿಖೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಗಿತ್ತೆ ಹೇಳಿದರು.