<p><strong>ಕುಂದಗೋಳ</strong>: ತಾಲ್ಲೂಕಿನ ಶಿರೂರ-ಹಿರೇನರ್ತಿ ಗ್ರಾಮದ ಮಾರ್ಗ ಮಧ್ಯದ ರಸ್ತೆ ನಾಲೈದು ದಿನದಿಂದ ಸುರಿಯುತ್ತಿರುವ ಮಳೆಗೆ ಪೂರ್ಣ ಕಿತ್ತು ಹೋಗಿ ರೈತರಿಗೆ, ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.</p>.<p>ಮಳೆಯ ನೀರು ಹರಿದು ರಸ್ತೆ ಕಿತ್ತು ಹೋಗಬಾರದು ಎಂದು ಕಳೆದ ವರ್ಷ ವಿಪತ್ತು ನಿರ್ವಹಣೆ (ಫ್ಲಡ್) ಯೋಜನೆಯಲ್ಲಿ ಸರ್ಕಾರದಿಂದ ₹10 ಲಕ್ಷ ಖರ್ಚು ಮಾಡಿ ರಸ್ತೆ ಪಕ್ಕದಲ್ಲಿ ತಡೆಗೊಡೆ ನಿರ್ಮಾಣ ಮಾಡಲಾಗಿತ್ತು. ಆದರೆ ಅಧಿಕಾರಿಗಳು, ಎಂಜಿನಿಯರ್ ಕಳಪೆ ಸಲಹೆ ಮತ್ತು ಕಾಮಗಾರಿಯಿಂದ ಗೋಡೆ ಒಡೆದು ಹೋಗಿದೆ.</p>.<p>ಒಂದೇ ವರ್ಷದಲ್ಲಿ ತಡೆಗೋಡೆ ಹಾಳಾಗಿದೆ. ಇದರಿಂದ ಅಕ್ಕಪಕ್ಕದ ಜಮೀನಿಗೆ ತೆರಳುವ ರೈತರು ಹರಸಾಹಸ ಪಡುವಂತಾಗಿದೆ. ಇನ್ನೂ ಮುಂಗಾರು ಬಿತ್ತನೆ ಪ್ರಾರಂಬವಾಗುತ್ತಿದ್ದು, ರೈತರು ತಮ್ಮ ಜಮೀನುಗಳಿಗೆ ಹೇಗೆ ತೆರಳಬೇಕು ಎಂಬುವುದೇ ಸವಾಲಾಗಿದೆ.</p>.<p>ಸುತ್ತುವರೆದು ಜಮೀನಿಗೆ ತೆರಳಿ ತಮ್ಮ ಕಾರ್ಯ ಮಾಡಬೇಕು. ಮೊದಲೇ ಕಷ್ಟದಲ್ಲಿರುವ ರೈತರಿಗೆ ಈ ರಸ್ತೆ ಅವಸ್ಥೆ ಸಂಕಷ್ಟ ತಂದೊಡ್ಡೊದೆ. ಇನ್ನೂ ಹಿರೇನೆರ್ತಿ ಗ್ರಾಮದಿಂದ ಶಿರೂರ ಮಾರ್ಗವಾಗಿ ಲಕ್ಷ್ಮೇಶ್ವರ, ಶಿಗ್ಗಾವಿ, ಸವಣೂರು, ಹೀಗೆ ನಾನಾ ಊರಿಗೆ ತೆರಳಲು ಜನರು ತಮ್ಮ ಸ್ವಂತ ವಾಹನಗಳ ಮೂಲಕ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಈಗ ಈ ರಸ್ತೆ ಹಾಳಾಗಿದ್ದರಿಂದ ಕುಂದಗೋಳ ಮಾರ್ಗವಾಗಿ ಮತ್ತೆ ಮುಖ್ಯರಸ್ತೆ ಮೂಲಕ ತೆರಳಬೇಕಾಗಿದೆ.</p>.<p>‘ಈ ರಸ್ತೆ ಹಾಳಾಗಿದ್ದರಿಂದ ರೈತರಿಗೆ ತುಂಬಾ ಕಷ್ಟವಾಗಿದೆ. ಸಾಲ ಮಾಡಿ ಬೀಜ, ಗೊಬ್ಬರ ತಂದು ಮುಂಗಾರು ಬಿತ್ತನೆ ತಯಾರಿಯಲ್ಲಿದ್ದ ನಮಗೆ ತೊಂದರೆಯಾಗಿದೆ’ ಎಂದು ಶಿರೂರ ಗ್ರಾಮದ ಮಂಜುನಾಥ ಅಳಲು ತೊಂಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಗೋಳ</strong>: ತಾಲ್ಲೂಕಿನ ಶಿರೂರ-ಹಿರೇನರ್ತಿ ಗ್ರಾಮದ ಮಾರ್ಗ ಮಧ್ಯದ ರಸ್ತೆ ನಾಲೈದು ದಿನದಿಂದ ಸುರಿಯುತ್ತಿರುವ ಮಳೆಗೆ ಪೂರ್ಣ ಕಿತ್ತು ಹೋಗಿ ರೈತರಿಗೆ, ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.</p>.<p>ಮಳೆಯ ನೀರು ಹರಿದು ರಸ್ತೆ ಕಿತ್ತು ಹೋಗಬಾರದು ಎಂದು ಕಳೆದ ವರ್ಷ ವಿಪತ್ತು ನಿರ್ವಹಣೆ (ಫ್ಲಡ್) ಯೋಜನೆಯಲ್ಲಿ ಸರ್ಕಾರದಿಂದ ₹10 ಲಕ್ಷ ಖರ್ಚು ಮಾಡಿ ರಸ್ತೆ ಪಕ್ಕದಲ್ಲಿ ತಡೆಗೊಡೆ ನಿರ್ಮಾಣ ಮಾಡಲಾಗಿತ್ತು. ಆದರೆ ಅಧಿಕಾರಿಗಳು, ಎಂಜಿನಿಯರ್ ಕಳಪೆ ಸಲಹೆ ಮತ್ತು ಕಾಮಗಾರಿಯಿಂದ ಗೋಡೆ ಒಡೆದು ಹೋಗಿದೆ.</p>.<p>ಒಂದೇ ವರ್ಷದಲ್ಲಿ ತಡೆಗೋಡೆ ಹಾಳಾಗಿದೆ. ಇದರಿಂದ ಅಕ್ಕಪಕ್ಕದ ಜಮೀನಿಗೆ ತೆರಳುವ ರೈತರು ಹರಸಾಹಸ ಪಡುವಂತಾಗಿದೆ. ಇನ್ನೂ ಮುಂಗಾರು ಬಿತ್ತನೆ ಪ್ರಾರಂಬವಾಗುತ್ತಿದ್ದು, ರೈತರು ತಮ್ಮ ಜಮೀನುಗಳಿಗೆ ಹೇಗೆ ತೆರಳಬೇಕು ಎಂಬುವುದೇ ಸವಾಲಾಗಿದೆ.</p>.<p>ಸುತ್ತುವರೆದು ಜಮೀನಿಗೆ ತೆರಳಿ ತಮ್ಮ ಕಾರ್ಯ ಮಾಡಬೇಕು. ಮೊದಲೇ ಕಷ್ಟದಲ್ಲಿರುವ ರೈತರಿಗೆ ಈ ರಸ್ತೆ ಅವಸ್ಥೆ ಸಂಕಷ್ಟ ತಂದೊಡ್ಡೊದೆ. ಇನ್ನೂ ಹಿರೇನೆರ್ತಿ ಗ್ರಾಮದಿಂದ ಶಿರೂರ ಮಾರ್ಗವಾಗಿ ಲಕ್ಷ್ಮೇಶ್ವರ, ಶಿಗ್ಗಾವಿ, ಸವಣೂರು, ಹೀಗೆ ನಾನಾ ಊರಿಗೆ ತೆರಳಲು ಜನರು ತಮ್ಮ ಸ್ವಂತ ವಾಹನಗಳ ಮೂಲಕ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಈಗ ಈ ರಸ್ತೆ ಹಾಳಾಗಿದ್ದರಿಂದ ಕುಂದಗೋಳ ಮಾರ್ಗವಾಗಿ ಮತ್ತೆ ಮುಖ್ಯರಸ್ತೆ ಮೂಲಕ ತೆರಳಬೇಕಾಗಿದೆ.</p>.<p>‘ಈ ರಸ್ತೆ ಹಾಳಾಗಿದ್ದರಿಂದ ರೈತರಿಗೆ ತುಂಬಾ ಕಷ್ಟವಾಗಿದೆ. ಸಾಲ ಮಾಡಿ ಬೀಜ, ಗೊಬ್ಬರ ತಂದು ಮುಂಗಾರು ಬಿತ್ತನೆ ತಯಾರಿಯಲ್ಲಿದ್ದ ನಮಗೆ ತೊಂದರೆಯಾಗಿದೆ’ ಎಂದು ಶಿರೂರ ಗ್ರಾಮದ ಮಂಜುನಾಥ ಅಳಲು ತೊಂಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>