‘ಸಹ ಬಹುತ್ವ ರಕ್ಷಾ ಬಂಧನದ ಸಂದೇಶ. ಸಹೋದರ, ಸಹೋದರಿಯರಿಗೆ ರಕ್ಷೆ ಕಟ್ಟಿ, ಪ್ರೀತಿಯಿಂದ ಮಾತನಾಡಿ, ಆತ್ಮೀಯತೆ ಬೆಳೆಸಿಕೊಳ್ಳಬೇಕು. ಅದು ಸಮಾಜದಲ್ಲಿ ಭಾವನಾತ್ಮಕತೆ ಬೆಳೆಸುತ್ತದೆ. ಒಡಹುಟ್ಟಿದವರಿಗಷ್ಟೇ ರಕ್ಷೆ ಕಟ್ಟಬೇಕು ಎಂದೇನಿಲ್ಲ, ಸ್ತ್ರೀ ಯಾರಿಗೆ ಬೇಕಾದರೂ ಕಟ್ಟಬಹುದು. ಮಾತೃತ್ವದ ಸ್ವಭಾವ ಸ್ತ್ರೀಯರಿಗೆ ಇರುವ ವಿಶೇಷ ಗುಣ. ಮಕ್ಕಳಿಗೆ ಯಾವ ಸಮಯದಲ್ಲಿ ಏನು ಅಗತ್ಯವಿದೆ, ಅದನ್ನು ಹೇಗೆ ಪೂರೈಸಬೇಕು ಎನ್ನುವುದು ಅವಳಿಗೆ ಮಾತ್ರ ಗೊತ್ತು. ಅವಳ ರಕ್ಷಣೆಯಲ್ಲಿ ಸಮಾಜ ನಿರತವಾಗಿದೆ ಎನ್ನುವುದೇ ರಕ್ಷಾ ಬಂಧನದ ಸಾರ’ ಎಂದರು.