‘ಧಾರ್ಮಿಕ ಜಾಗೃತಿಗಾಗಿ ಮತ್ತು ನಾಡಿನ ಸಂಸ್ಕೃತಿ, ಸಂಸ್ಕಾರಗಳ ಸಂರಕ್ಷಣೆಗಾಗಿ ವಿಭಿನ್ನವಾದ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಧಾರವಾಡ ವೀರಶೈವ ಜಂಗಮ ಸಂಸ್ಥೆಯು ಈ ಅಭಿಯಾನ ಹಮ್ಮಿಕೊಂಡಿದೆ. ಕಾಶಿ ಮತ್ತು ನೇಪಾಳದಿಂದ ರುದ್ರಾಕ್ಷಿಗಳನ್ನು ತರಿಸಲಾಗಿದೆ. ಕುಂದಗೋಳ, ಹುಬ್ಬಳ್ಳಿ, ಧಾರವಾಡದಲ್ಲಿನ ವಿವಿಧ ಮಹಿಳಾ ಮಂಡಳ ಸದಸ್ಯರು, ಸ್ತ್ರಿ ಶಕ್ತಿ ಸಂಘಗಳ ಸದಸ್ಯರು ರುದ್ರಾಕ್ಷಿಗೆ ಶಿವದಾರ ಪೋಣಿಸುವ ಸೇವೆ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಸಂಶಿ, ಶಿರೂರ ಮತ್ತು ಕುಂದಗೋಳದಲ್ಲಿ ಮುಸ್ಲಿಂ ಮಹಿಳೆಯರು ಭಕ್ತಿಯಿಂದ ರುದ್ರಾಕ್ಷಿ ಜೋಡಿಸಿದ್ದು, ಅವರ ಸೌಹಾರ್ದತೆ, ಭಾವೈಕ್ಯತೆ ಎತ್ತಿ ತೋರಿಸುತ್ತದೆ’ ಎಂದು ಸ್ವಾಮೀಜಿ ಹೇಳಿದರು.