ಕುಂದಗೋಳ: ಪಟ್ಟಣದ ಶಿವಾಜಿನಗರ ಕಿಲ್ಲಾ ಓಣಿಯ ಶಂಭುಲಿಂಗೇಶ್ವರ ಮಹಾ ರಥೋತ್ಸವ ಸೋಮವಾರ ಸಡಗರ ಸಂಭ್ರಮದಿಂದ ಜರಗಿತು.
ಬೆಳಿಗ್ಗೆ ದೇವರಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಮಾಡಲಾಯಿತು. ಹೂಗಳಿಂದ ಸಿಂಗರಿಸಲಾಗಿತ್ತು. ಮಧ್ಯಾಹ್ನ ಅನ್ನ ದಾಸೋಹ ನೆಡೆಯಿತು.
ಕುಂದಗೋಳದ ಹಿರೇಮಠದ ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣಪುರ ಮಠದ ಬಸವಣ್ಣ ಅಜ್ಜನವರು, ಶಿವಾನಂದ ಮಠದ ಮಹಾಂತ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಡೊಳ್ಳು ಕುಣಿತ, ವಾದ್ಯ ತಂಡಗಳು ಜಾತ್ರೆಗೆ ಮೆರಗು ನೀಡಿದವು. ಅರ್ಚಕರಾದ ವಿಠಲ ಹಂಪಿಹೊಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಕೊಕಾಟೆ, ಅರವಿಂದ ಕಟಗಿ, ರಮೇಶ ಕೊಪ್ಪದ, ಶಿವಾನಂದ ಕಟಗಿ, ಮಹದೇವಪ್ಪ ಬಮ್ಮಸಮುದ್ರ ಇದ್ದರು.