‘ಹೈಕಮಾಂಡ್ ಅನುಮತಿ ನೀಡಿದರೆ ಕಾಂಗ್ರೆಸ್ನ 40-45 ಶಾಸಕರನ್ನು ಪಕ್ಷಕ್ಕೆ ಕರೆದುಕೊಂಡು ಬರುತ್ತೇನೆ’ ಎನ್ನುವ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರ ಹೇಳಿಕೆಗೆ, ಶನಿವಾರ ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಶಕ್ತಿಯುತವಾದ ಸರ್ಕಾರ ರಚಿಸಿದೆ. ಅಸ್ತಿತ್ವ ಕಳೆದುಕೊಂಡ ಬಿಜೆಪಿಗೆ ಕಾಂಗ್ರೆಸ್ನಿಂದ ಯಾರೂ ಹೋಗುವುದಿಲ್ಲ. ಆಪರೇಷನ್ ಕಮಲ ಮಾಡುವುದಿದ್ದರೆ, ನಾಳೆಯೇ ಮಾಡಲಿ ನೋಡೋಣ’ ಎಂದು ಸವಾಲು ಹಾಕಿದರು.