ಸದ್ಯ ಶಿಲ್ಪ ಕಲಾ ಅಕಾಡೆಮಿ ಸದಸ್ಯರಾಗಿರುವ ನವೀನ ಅವರು, ಹುಬ್ಬಳ್ಳಿಯ ನಾಗಶೆಟ್ಟಿ ಕೊಪ್ಪದ ಹನುಮಂತ ದೇವರಿಗೆ 130ಕೆ.ಜಿ. ಬೆಳ್ಳಿ ರಥ, ಲಿಂಗಸೂರು ಬಳಿಯ ಗುಡಿಗೆ 40 ಕೆ.ಜಿ. ರಥ ಸಿದ್ಧಪಡಿಸಿದ ಅನುಭವ ಹೊಂದಿದವರು. ಇವರ ನೆರವು ಪಡೆದ ಭಕ್ತರ ತಂಡ ಅವರಿಗೆ 12 ಕೆ.ಜಿ. ಬೆಳ್ಳಿ ನೀಡಿ ಕವಚದ ಕೆಲಸವನ್ನು ನೀಡಿತು.