ಹುಬ್ಬಳ್ಳಿ:ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದ ಯೋಧ ಮಂಜಪ್ಪ ಹನುಮಂತಪ್ಪ ವಾಲೀಕಾರ (29), ಜಮ್ಮು– ಕಾಶ್ಮೀರ ಗಡಿಯಲ್ಲಿ ಉಗ್ರರ ಜೊತೆಗೆ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಮಂಜಪ್ಪ ನಿಧನರಾಗಿರುವ ವಿಷಯವನ್ನು ಮದ್ರಾಸ್ ರೆಜಿಮೆಂಟ್ನ ಅಧಿಕಾರಿಗಳು ಕುಟುಂಬ ವರ್ಗದವರಿಗೆ ತಿಳಿಸಿದ್ದಾರೆ. 9 ವರ್ಷಗಳಿಂದ ಸೇನೆಯಲ್ಲಿದ್ದ ಅವರು ಆರು ತಿಂಗಳ ಹಿಂದೆ ಮದುವೆಯಾಗಿದ್ದರು. ಅವರ ಪತ್ನಿ ಗರ್ಭಿಣಿಯಾಗಿದ್ದಾರೆ.
‘ಸೇನಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ವೀರಯೋಧನ ಪಾರ್ಥಿವ ಶರೀರ ಯಾವಾಗ ಬರಲಿದೆ ಎಂಬುದು ಬುಧವಾರ ಗೊತ್ತಾಗಲಿದೆ’ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.