<p><strong>ಹುಬ್ಬಳ್ಳಿ: </strong>ಘನತ್ಯಾಜ್ಯ ವಿಲೇವಾರಿ ಉದ್ದೇಶದಿಂದ ಅವಳಿ ನಗರದಲ್ಲಿ ಎರಡು ಕಾಂಪೋಸ್ಟ್ ಘಟಕಗಳನ್ನು ಡಿಸೆಂಬರ್ ಅಂತ್ಯದೊಳಗೆ ಆರಂಭಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದರು.</p>.<p>ಇಲ್ಲಿನ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಘನತ್ಯಾಜ್ಯ ನಿರ್ವಹಣೆಯ ರಾಜ್ಯ ಕರಡು ನೀತಿಗೆ ಸಲಹೆ, ಅಭಿಪ್ರಾಯ, ಆಕ್ಷೇಪಣೆಗಳ ಸಂಗ್ರಹ ಸಂಬಂಧ ಆಯೋಜಿಸಲಾಗಿದ್ದ ಪಾಲಿಕೆಯ ಮಧ್ಯಸ್ಥಗಾರರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಘನತ್ಯಾಜ್ಯವನ್ನು ಸಮರ್ಪಕವಾಗಿ ಮರುಬಳಿಕೆ ಮಾಡುವ ನಿಟ್ಟಿನಲ್ಲಿ ಪ್ರತಿ ಮನೆ, ಅಪಾರ್ಟ್ಮೆಂಟ್, ವಾಣಿಜ್ಯ ಕಟ್ಟಡಗಳಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಹಾಗೂ ಸಾರ್ವಜನಿಕ ಉದ್ಯಾನಗಳಲ್ಲಿ ಕಾಂಪೋಸ್ಟ್ ಸಮುದಾಯ ಘಟಕಗಳನ್ನು ಆರಂಭಿಸಲು ಆದ್ಯತೆ ನೀಡಲಾಗುವುದು ಎಂದರು.</p>.<p class="Subhead"><strong>ಪುರಸ್ಕಾರ:</strong>ನಗರ ಪ್ರದೇಶದ ಮನೆಗಳಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸುವವರನ್ನು ಗುರುತಿಸಿ, ಉತ್ತೇಜಿಸುವ ಉದ್ದೇಶದಿಂದ ‘ಪರಿಸರ ಸ್ನೇಹಿ ಮನೆ’ ಪುರಸ್ಕಾರ ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.</p>.<p>ಶಿವಳ್ಳಿಯಲ್ಲಿ 67 ಎಕರೆ ವಿಸ್ತೀರ್ಣದಲ್ಲಿ ಕಟ್ಟಡಗಳ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗುತ್ತಿದ್ದು, ಮಾರ್ಚ್ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ. ವೈದ್ಯಕೀಯ, ಕೈಗಾರಿಕಾ, ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೂ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.</p>.<p class="Subhead"><strong>ತಾತ್ಕಾಲಿಕ ಸ್ಥಳಾಂತರ:</strong>ಗಣೇಶಪೇಟೆ ಮೀನು ಮಾರುಕಟ್ಟೆಯನ್ನು ಆಧುನಿಕರಣಗೊಳಿಸುವ ಕಾರ್ಯಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಅಲ್ಲಿರುವ ವ್ಯಾಪಾರಸ್ಥರನ್ನು ಶೀಘ್ರದಲ್ಲೇ ಮಂಟೂರು ರಸ್ತೆಯ ಕೆ.ವಿ.ನಗರಕ್ಕೆ ಸ್ಥಳಾಂತರಗೊಳಿಸಲಾಗುವುದು ಎಂದರು.</p>.<p class="Subhead"><strong>ಬಯೋಮೈನಿಂಗ್:</strong>ಅವಳಿ ನಗರದಲ್ಲಿ ಪ್ರತಿ ದಿನ 400 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಹುಬ್ಬಳ್ಳಿಯ ಕಾರವಾರ ರಸ್ತೆಯ ಡಂಪಿಂಗ್ ಯಾರ್ಡ್ ಮತ್ತು ಧಾರವಾಡದ ಹೊಸಯಲ್ಲಾಪುರದಲ್ಲಿ ಈಗಾಗಲೇ 8 ಲಕ್ಷ ಟನ್ ಕಸದ ರಾಶಿ ಬಿದ್ದಿದೆ. ಇಲ್ಲಿ ಬಯೋಮೈನಿಂಗ್ ಆರಂಭಿಸಲಾಗುವುದು ಎಂದು ತಿಳಿಸಿದರು.</p>.<p class="Subhead"><strong>ಆಕ್ಷೇಪ ಸಲ್ಲಿಕೆ ಇಂದು ಕೊನೆ:</strong>ಘನತ್ಯಾಜ್ಯ ನಿರ್ವಹಣೆಯ ರಾಜ್ಯ ಕರಡು ನೀತಿಗೆ ಸಂಬಂಧಿಸಿದ ಸಲಹೆ, ಆಕ್ಷೇಪಗಳಿದ್ದರೇ ನ.9ರ ಸಂಜೆ ಒಳಗಾಗಿ hdmcswachhbharat@gmail.com ಗೆ ಕಳುಹಿಸುವಂತೆ ಮನವಿ ಮಾಡಿದರು.</p>.<p>ಘನತ್ಯಾಜ್ಯ ನಿರ್ವಹಣೆಯ ರಾಜ್ಯ ಕರಡು ನೀತಿಯ ಕುರಿತು ಸಭೆಗೆ ಮಾಹಿತಿ ನೀಡಿದ ಪರಿಸರ ಎಂಜಿನಿಯರ್ ನಯನಾ, ಕಡ್ಡಾಯವಾಗಿ ವಾರ್ಡ್ ಕಮಿಟಿ ರಚಿಸುವಂತೆ, ತ್ಯಾಜ್ಯ ವಿಲೇವಾರಿಗೆ ಸಿಎಸ್ಆರ್ ಫಂಡ್ ಬಳಸಿಕೊಳ್ಳುವಂತೆ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.</p>.<p>ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಎನ್.ಜಿ.ಒ, ಸ್ವ-ಸಹಾಯ ಸಂಘಗಳು ಪದಾಧಿಕಾರಿಗಳು ಸೇರಿದಂತೆ ಕೇವಲ 53 ಜನ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 9 ಜನ ಲಿಖಿತವಾಗಿ, 20 ಜನ ಇ–ಮೇಲ್ ಮೂಲಕವಾಗಿ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಿದರು. ಘನತ್ಯಾಜ್ಯ ವಿಲೇವಾಡಿ ವಿಭಾಗದ ಎಂಜಿನಿಯರ್ ವಿಜಯಕುಮಾರ್, ಪರಿಸರ ಎಂಜಿನಿಯರ್ ಶ್ರೀಧರ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಘನತ್ಯಾಜ್ಯ ವಿಲೇವಾರಿ ಉದ್ದೇಶದಿಂದ ಅವಳಿ ನಗರದಲ್ಲಿ ಎರಡು ಕಾಂಪೋಸ್ಟ್ ಘಟಕಗಳನ್ನು ಡಿಸೆಂಬರ್ ಅಂತ್ಯದೊಳಗೆ ಆರಂಭಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದರು.</p>.<p>ಇಲ್ಲಿನ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಘನತ್ಯಾಜ್ಯ ನಿರ್ವಹಣೆಯ ರಾಜ್ಯ ಕರಡು ನೀತಿಗೆ ಸಲಹೆ, ಅಭಿಪ್ರಾಯ, ಆಕ್ಷೇಪಣೆಗಳ ಸಂಗ್ರಹ ಸಂಬಂಧ ಆಯೋಜಿಸಲಾಗಿದ್ದ ಪಾಲಿಕೆಯ ಮಧ್ಯಸ್ಥಗಾರರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಘನತ್ಯಾಜ್ಯವನ್ನು ಸಮರ್ಪಕವಾಗಿ ಮರುಬಳಿಕೆ ಮಾಡುವ ನಿಟ್ಟಿನಲ್ಲಿ ಪ್ರತಿ ಮನೆ, ಅಪಾರ್ಟ್ಮೆಂಟ್, ವಾಣಿಜ್ಯ ಕಟ್ಟಡಗಳಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಹಾಗೂ ಸಾರ್ವಜನಿಕ ಉದ್ಯಾನಗಳಲ್ಲಿ ಕಾಂಪೋಸ್ಟ್ ಸಮುದಾಯ ಘಟಕಗಳನ್ನು ಆರಂಭಿಸಲು ಆದ್ಯತೆ ನೀಡಲಾಗುವುದು ಎಂದರು.</p>.<p class="Subhead"><strong>ಪುರಸ್ಕಾರ:</strong>ನಗರ ಪ್ರದೇಶದ ಮನೆಗಳಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸುವವರನ್ನು ಗುರುತಿಸಿ, ಉತ್ತೇಜಿಸುವ ಉದ್ದೇಶದಿಂದ ‘ಪರಿಸರ ಸ್ನೇಹಿ ಮನೆ’ ಪುರಸ್ಕಾರ ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.</p>.<p>ಶಿವಳ್ಳಿಯಲ್ಲಿ 67 ಎಕರೆ ವಿಸ್ತೀರ್ಣದಲ್ಲಿ ಕಟ್ಟಡಗಳ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗುತ್ತಿದ್ದು, ಮಾರ್ಚ್ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ. ವೈದ್ಯಕೀಯ, ಕೈಗಾರಿಕಾ, ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೂ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.</p>.<p class="Subhead"><strong>ತಾತ್ಕಾಲಿಕ ಸ್ಥಳಾಂತರ:</strong>ಗಣೇಶಪೇಟೆ ಮೀನು ಮಾರುಕಟ್ಟೆಯನ್ನು ಆಧುನಿಕರಣಗೊಳಿಸುವ ಕಾರ್ಯಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಅಲ್ಲಿರುವ ವ್ಯಾಪಾರಸ್ಥರನ್ನು ಶೀಘ್ರದಲ್ಲೇ ಮಂಟೂರು ರಸ್ತೆಯ ಕೆ.ವಿ.ನಗರಕ್ಕೆ ಸ್ಥಳಾಂತರಗೊಳಿಸಲಾಗುವುದು ಎಂದರು.</p>.<p class="Subhead"><strong>ಬಯೋಮೈನಿಂಗ್:</strong>ಅವಳಿ ನಗರದಲ್ಲಿ ಪ್ರತಿ ದಿನ 400 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಹುಬ್ಬಳ್ಳಿಯ ಕಾರವಾರ ರಸ್ತೆಯ ಡಂಪಿಂಗ್ ಯಾರ್ಡ್ ಮತ್ತು ಧಾರವಾಡದ ಹೊಸಯಲ್ಲಾಪುರದಲ್ಲಿ ಈಗಾಗಲೇ 8 ಲಕ್ಷ ಟನ್ ಕಸದ ರಾಶಿ ಬಿದ್ದಿದೆ. ಇಲ್ಲಿ ಬಯೋಮೈನಿಂಗ್ ಆರಂಭಿಸಲಾಗುವುದು ಎಂದು ತಿಳಿಸಿದರು.</p>.<p class="Subhead"><strong>ಆಕ್ಷೇಪ ಸಲ್ಲಿಕೆ ಇಂದು ಕೊನೆ:</strong>ಘನತ್ಯಾಜ್ಯ ನಿರ್ವಹಣೆಯ ರಾಜ್ಯ ಕರಡು ನೀತಿಗೆ ಸಂಬಂಧಿಸಿದ ಸಲಹೆ, ಆಕ್ಷೇಪಗಳಿದ್ದರೇ ನ.9ರ ಸಂಜೆ ಒಳಗಾಗಿ hdmcswachhbharat@gmail.com ಗೆ ಕಳುಹಿಸುವಂತೆ ಮನವಿ ಮಾಡಿದರು.</p>.<p>ಘನತ್ಯಾಜ್ಯ ನಿರ್ವಹಣೆಯ ರಾಜ್ಯ ಕರಡು ನೀತಿಯ ಕುರಿತು ಸಭೆಗೆ ಮಾಹಿತಿ ನೀಡಿದ ಪರಿಸರ ಎಂಜಿನಿಯರ್ ನಯನಾ, ಕಡ್ಡಾಯವಾಗಿ ವಾರ್ಡ್ ಕಮಿಟಿ ರಚಿಸುವಂತೆ, ತ್ಯಾಜ್ಯ ವಿಲೇವಾರಿಗೆ ಸಿಎಸ್ಆರ್ ಫಂಡ್ ಬಳಸಿಕೊಳ್ಳುವಂತೆ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.</p>.<p>ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಎನ್.ಜಿ.ಒ, ಸ್ವ-ಸಹಾಯ ಸಂಘಗಳು ಪದಾಧಿಕಾರಿಗಳು ಸೇರಿದಂತೆ ಕೇವಲ 53 ಜನ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 9 ಜನ ಲಿಖಿತವಾಗಿ, 20 ಜನ ಇ–ಮೇಲ್ ಮೂಲಕವಾಗಿ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಿದರು. ಘನತ್ಯಾಜ್ಯ ವಿಲೇವಾಡಿ ವಿಭಾಗದ ಎಂಜಿನಿಯರ್ ವಿಜಯಕುಮಾರ್, ಪರಿಸರ ಎಂಜಿನಿಯರ್ ಶ್ರೀಧರ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>