ಮೆರವಣಿಗೆಯಲ್ಲಿ ಕುಂಭಮೇಳ, ಕರಡಿ ಮಜಲು, ಡೊಳ್ಳು ಕುಣಿತ, ಶಾಲಾ ಮಕ್ಕಳ ಲೇಝಿಮ್ ತಂಡ ಸೇರಿದಂತೆ ಹಲವು ಕಲಾಮೇಳಗಳು ಸಮ್ಮೇಳನಕ್ಕೆ ಮೆರಗು ನೀಡಿದವು. ನೋಡಿದೆಲ್ಲಡೆ ಕನ್ನಡ ಧ್ವಜಗಳು ರಾರಾಜಿಸಿದವು. ಮಹಾತ್ಮರ ವೇಷಭೂಣ ಧರಿಸಿದ್ದ ಮಕ್ಕಳು ಗಮನ ಸೆಳೆದರು. ಒಟ್ಟಿನಲ್ಲಿ ಗ್ರಾಮದ ತುಂಬ ನಾಡು-ನುಡಿ ಝೇಂಕಾರ ಅನುರಣಿಸಿತು.