ಅಪಘಾತ ಸಾವು: ಇಲ್ಲಿನ ವರೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿದ್ದರಿಂದ ರಾಜಸ್ಥಾನ ಮೂಲದ, ಸದ್ಯ ಹುಬ್ಬಳ್ಳಿಯ ಅರಳಿಕಟ್ಟಿ ಓಣಿ ನಿವಾಸಿ ಗಜೇಂದ್ರಸಿಂಗ್ ದೇವರಾ (38) ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಹುಬ್ಬಳ್ಳಿ ರೇಣುಕಾ ನಗರ ನಿವಾಸಿ ಡಾ.ಆನಂದ ತೀರ್ಥ ಮಠದ ಎಂಬವರು ಶಿಗ್ಗಾವಿಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.