ಯಾವುದೇ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಿದಾಗ ಅವರ ರಕ್ಷಣೆ, ಭದ್ರತಾ ವ್ಯವಸ್ಥೆಯ ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರದ್ದಾಗಿರುತ್ತದೆ. ಮೋದಿ ಅವರ ಪಂಜಾಬ್ ಪ್ರವಾಸದಲ್ಲಿ ವಾಹನ ಕೆಲವು ಅಂತರದವರೆಗೆ ರಸ್ತೆ ಮೇಲೆ ಸಂಚರಿಸುವ ಪೂರ್ವ ಆ ಮಾರ್ಗದಲ್ಲಿ ಯಾವುದೇ ಜನಸಂದಣಿ ಇರುವುದಿಲ್ಲ. ಅದು ಸಂಪೂರ್ಣ ಜನಸಂಚಾರ ರಹಿತವಾಗಿರುವುದೆಂದು ರಾಜ್ಯದ ಮುಖ್ಯಕಾರ್ಯದರ್ಶಿ ಹಾಗೂ ಡಿಜಿಪಿ ಸ್ಪಷ್ಟವಾಗಿ ಹೇಳಿದ್ದರೂ ಪ್ರತಿಭಟನಾಕಾರರು ನುಸುಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲು ಖಚಿತ ಎಂದು ಅರಿತು ಕಾಂಗ್ರೆಸ್ ಇಂಥ ಕೃತ್ಯಕ್ಕೆ ಕೈ ಹಾಕಿದ್ದು ನಾಚಿಕೆಗೇಡು’ ಎಂದು ಟೀಕಿಸಿದ್ದಾರೆ.