ಹುಬ್ಬಳ್ಳಿ: ಶಹರ ಹಾಗೂ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಚಾಕು ಇರಿತದ ಎರಡು ಪ್ರತ್ಯೇಕ ಪ್ರಕರಣಗಳು ನಡೆದಿವೆ.
ಶಹರ ಪೊಲೀಸ್ ಠಾಣೆಯ ಹರಿಶ್ಚಂದ್ರ ಕಾಲೊನಿಯಲ್ಲಿ ರಾಜಶೇಖರ ಅಯ್ಯರ್ ಅವರಿಗೆ ಚಾಕು ಇರಿತವಾಗಿದ್ದು, ಅವರನ್ನು ಕಿಮ್ಸ್'ಗೆ ದಾಖಲಿಸಲಾಗಿದೆ. ಪವನ ಬಿಜವಾಡ, ಶುಭಮ್ ಬಿಜವಾಡ, ಮೋಹನ ಗಂಡಿನವರ ಮತ್ತು ರಾಬಿನ್ ಮರಿಯಾಳ ಆರೋಪಿತರು.
ನಾಲ್ವರು ಸ್ನೇಹಿತರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ರಾಜಶೇಖರಗೆ ಚಾಕು ಇರಿದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೇಂಡಿಗೇರಿ ಪೊಲೀಸ್ ಠಾಣೆಯ ಕಸ್ತೂರಿಬಾ ನಗರದಲ್ಲಿ ನವೀನ ಅವರ ಮೇಲೆ ತನ್ವೀರ್ ಎಂಬಾತ ಚಾಕು ಇರಿದಿದ್ದಾನೆ.
ಇಬ್ಬರೂ ಕಸ್ತೂರಿಬಾ ನಗರದ ನಿವಾಸಿಯಾಗಿದ್ದಾರೆ. ಹಣಕಾಸಿನ ವಿಷಯಕ್ಕೆ ಪರಸ್ಪರ ಜಗಳ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.