ರಥ ಸಾಗುವ ಬೀದಿಯ ತುಂಬೆಲ್ಲ ರಂಗೋಲಿ ಬಿಡಿಸಿ, ಸುಸ್ವಾಗತ ಎಂದು ಬರೆಯಲಾಗಿತ್ತು. ಭಕ್ತರು ಹರ ಹರ ಮಹಾದೇವ ಎಂದು ಘೋಷ ಹಾಕುತ್ತ ರಥ ಎಳೆಯುತ್ತಿದ್ದರೆ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಮನೆಗಳ ಮಹಡಿಗಳ ಮೇಲೆ ಮಹಿಳೆಯರು, ಮಕ್ಕಳು ಸೇರಿದಂತೆ ಓಣಿಯ ಭಕ್ತರು ನಿಂತು ರಥೋತ್ಸವವನ್ನು ಕಣ್ತುಂಬಿಕೊಂಡರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಲಿಂಬು ಎಸೆದು ಭಕ್ತಿ ಸಮರ್ಪಿಸಿದರು.