358 ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಹಾಗೂ ಅವರ ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ ಶಿವಲೀಲಾ ಕುಲಕರ್ಣಿ ಮಾತನಾಡಿ, ‘ಎಲ್ ಆ್ಯಂಡ್ ಟಿ ಕೇವಲ ಪೈಪ್ ಲೈನ್ ಉತ್ಪಾದನೆ, ಅಳವಡಿಕೆಯಲ್ಲಿ ನುರಿತ ಕಂಪನಿ. ಅವರಿಗೆ ನೀರು ಸರಬರಾಜು ಮಾಡಿದ ಯಾವುದೇ ಅನುಭವವಿಲ್ಲ. ಅಲ್ಲದೆ, ಜನಾಭಿಪ್ರಾಯ ಸಂಗ್ರಹಿಸದೇ, ಯಾವ ಮಾನದಂಡದ ಆಧಾರದ ಮೇಲೆ ಗುತ್ತಿಗೆ ಕೊಡಲಾಗಿದೆ ಎಂಬುದು ತಿಳಿಯುತ್ತಿಲ್ಲ. ಜಲಮಂಡಳಿ ವಿರುದ್ದ ದೂರುಗಳಿವೆಯೇ? ಎಲ್ ಆ್ಯಂಡ್ ಟಿ ಕಂಪನಿಯ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ದಾಖಲೆಯನ್ನು ಸರ್ಕಾರ ಸಂಪೂರ್ಣವಾಗಿ ಬಹಿರಂಗ ಪಡಿಸಬೇಕು’ ಎಂದು ಒತ್ತಾಯಿಸಿದರು.