ವಕೀಲರಾದ ಸಿ.ಬಿ. ಪಾಟೀಲ, ಆರ್.ಬಿ. ಉಳ್ಳಾಗಡ್ಡಿ ಹಾಗೂ ಎ.ವಿ. ಬಳಿಗೇರ, ‘ವಕೀಲರು ಎಂದರೆ ಅಧಿಕಾರಿಗಳಿಗೆ ಅಸಡ್ಡೆ ಎಂಬಂತಾಗಿದೆ. ದಿನದ 24 ಗಂಟೆಯೂ ಪಾಲಿಕೆ ಆಯುಕ್ತರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅದನ್ನು ಬಿಟ್ಟು ಮನವಿ ಸಲ್ಲಿಸಲು ಹೋದ ವಕೀಲರ ಮೇಲೆ ಪ್ರಕರಣ ದಾಖಲಿಸಿದ್ದು ಅಕ್ಷಮ್ಯ’ ಎಂದು ಟೀಕಿಸಿದರು.
ವಕೀಲರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಡಿಸಿಪಿ ರೇಣುಕಾ ಸುಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.