ಸಂಘದ ಸದಸ್ಯರು ಇಲ್ಲಿನ ಕಲಾಭವನದಿಂದ ಕೋರ್ಟ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಜಿ. ಹನುಮಂತಪ್ಪ, ಪ್ರಮುಖರಾದ ರಿಯಾಜ್ ಅಹ್ಮದ್ ಸನದಿ, ಮೊಹ್ಮದ್ ಖಾದರಿ ಬಾಗೇವಾಡಿ, ಶಮಶಾದಬಿ ಮುಲ್ಲಾ, ಆನಂದ ಕುಲಕರ್ಣಿ, ಆರ್.ಎಂ.ಕುಬೇರಪ್ಪ, ಎಸ್.ಎಲ್.ಜಾಧವ, ಮುತ್ತುರಾಜ ಮತ್ತಿಕೊಪ್ಪ, ಸೋಮಪ್ಪ ಮುದೆಣ್ಣವರ ಇದ್ದರು.