ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಲಾಕ್ಡೌನ್ ನಿಂದಾಗಿ ಗೋವಾದಲ್ಲಿ ಇರುವ ಜಿಲ್ಲೆಯ ಕನ್ನಡಿಗರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾರಣ ಅವರಿಗೆ ಎಂ.ಬಿ.ಪಾಟೀಲ ಫೌಂಡೇಶನ್ ವತಿಯಿಂದ 5ಕೆ.ಜಿ. ಗೋಧಿ ಹಿಟ್ಟು, 3 ಕೆ.ಜಿ. ಅಕ್ಕಿ, 1 ಕೆ.ಜಿ.ಬೇಳೆ ಹಾಗೂ ಅಡುಗೆ ಎಣ್ಣೆ, ಮಸಾಲೆ ಪದಾರ್ಥಗಳನ್ನು ಒಳಗೊಂಡ 2 ಸಾವಿರ ಪ್ಯಾಕೆಟ್ ಗಳನ್ನು ಲಾರಿಗಳ ಮೂಲಕ ಕಳುಹಿಸಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಕಳುಹಿಸಲಾಗುವುದು ಎಂದರು.