<p><strong>ಮುಳಗುಂದ: </strong>ಸಮೀಪದ ಹೊಸೂರು ಗ್ರಾಮದ ಬೂದಯ್ಯ ಹಿರೇಮಠ ಎಂಬಾತನ ಮನೆಯ ಮೇಲೆ ದಾಳಿ ನಡೆಸಿರುವ ಕೃಷಿ ಇಲಾಖೆ ಜಾರಿ ದಳದ ಸಿಬ್ಬಂದಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 40 ಚೀಲ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ. ದಾಖಲೆ ನೀಡುವಂತೆ ಬೂದಯ್ಯ ಅವರಿಗೆ ಸೂಚನೆ ನೀಡಿದ್ದಾರೆ.</p>.<p>ರೈತರೊಬ್ಬರು ನೀಡಿದ ದೂರು ಆಧರಿಸಿ ದಾಳಿ ನಡೆಸಲಾಗಿದೆ ಎಂದು ಗದಗ ಜಾರಿ ದಳದ ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲ ತಿಳಿಸಿದ್ದಾರೆ.</p>.<p>ಕೆಲವು ಅಧಿಕೃತ ಮಾರಾಟಗಾರರು ಹೆಚ್ಚು ಹಣ ಪಡೆದು ಯೂರಿಯಾ ಮಾರಾಟ ಮಾಡುತ್ತಿರುವ<br />ಆರೋಪ ಇದೆ. ಹೆಚ್ಚಿನ ದರಕ್ಕೆ ಹಾಗೂ ರಸೀದಿ ಇಲ್ಲದೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ಮೇಲೆಯು ಕ್ರಮ ಜರುಗಿಸುತ್ತೇವೆ. ಪ್ರತಿ ರೈತನಿಗೆ 2 ಚೀಲ ಮಾರಾಟ ಮಾಡಬೇಕು. ತೇವಾಂಶದ ಕಾರಣದಿಂದ ರೈತರು ಹೆಚ್ಚು ಯೂರಿಯಾ ಉಪಯೋಗ ಮಾಡುತ್ತಿದ್ದು ಅದಕ್ಕಾಗಿ ಕೊರತೆ ಉಂಟಾಗಿದೆ ಎಂದರು.</p>.<p>ಅಕ್ರಮ ಎಸಗುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿಯಲ್ಲಿ 5 ವರ್ಷಗಳ ಶಿಕ್ಷೆ ಹಾಗೂ<br />ದಂಡವನ್ನು ವಿಧಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಗುಂದ: </strong>ಸಮೀಪದ ಹೊಸೂರು ಗ್ರಾಮದ ಬೂದಯ್ಯ ಹಿರೇಮಠ ಎಂಬಾತನ ಮನೆಯ ಮೇಲೆ ದಾಳಿ ನಡೆಸಿರುವ ಕೃಷಿ ಇಲಾಖೆ ಜಾರಿ ದಳದ ಸಿಬ್ಬಂದಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 40 ಚೀಲ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ. ದಾಖಲೆ ನೀಡುವಂತೆ ಬೂದಯ್ಯ ಅವರಿಗೆ ಸೂಚನೆ ನೀಡಿದ್ದಾರೆ.</p>.<p>ರೈತರೊಬ್ಬರು ನೀಡಿದ ದೂರು ಆಧರಿಸಿ ದಾಳಿ ನಡೆಸಲಾಗಿದೆ ಎಂದು ಗದಗ ಜಾರಿ ದಳದ ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲ ತಿಳಿಸಿದ್ದಾರೆ.</p>.<p>ಕೆಲವು ಅಧಿಕೃತ ಮಾರಾಟಗಾರರು ಹೆಚ್ಚು ಹಣ ಪಡೆದು ಯೂರಿಯಾ ಮಾರಾಟ ಮಾಡುತ್ತಿರುವ<br />ಆರೋಪ ಇದೆ. ಹೆಚ್ಚಿನ ದರಕ್ಕೆ ಹಾಗೂ ರಸೀದಿ ಇಲ್ಲದೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ಮೇಲೆಯು ಕ್ರಮ ಜರುಗಿಸುತ್ತೇವೆ. ಪ್ರತಿ ರೈತನಿಗೆ 2 ಚೀಲ ಮಾರಾಟ ಮಾಡಬೇಕು. ತೇವಾಂಶದ ಕಾರಣದಿಂದ ರೈತರು ಹೆಚ್ಚು ಯೂರಿಯಾ ಉಪಯೋಗ ಮಾಡುತ್ತಿದ್ದು ಅದಕ್ಕಾಗಿ ಕೊರತೆ ಉಂಟಾಗಿದೆ ಎಂದರು.</p>.<p>ಅಕ್ರಮ ಎಸಗುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿಯಲ್ಲಿ 5 ವರ್ಷಗಳ ಶಿಕ್ಷೆ ಹಾಗೂ<br />ದಂಡವನ್ನು ವಿಧಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>