ರೋಣ: ತಾಲ್ಲೂಕಿನ ಮುಗಳಿ ಗ್ರಾಮದ ಅಯ್ಯಪ್ಪ ತಾಳಿ ಎಂಬ ರೈತ ಗ್ರಾಮದ ಬಸಪ್ಪ ಉಸಲಕೊಪ್ಪ ಎಂಬುವರ ಹೊಲದಲ್ಲಿ ಅವರ ಎತ್ತುಗಳಿಂದ ಕೇವಲ 9 ತಾಸಿನಲ್ಲಿ 17 ಎಕರೆ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಇಂಥ ಸಾಹಸಗಳು ವಿದ್ಯಾವಂತ ಯುವಕರಲ್ಲಿ ಕೃಷಿಯತ್ತ ಆಸಕ್ತಿ ಮೂಡಿಸಲು ಸಹಾಯಕವಾಗಿದೆ ಎಂದು ಹೇಳಿದರು.
ಬೆಳಿಗ್ಗೆ 6 ಗಂಟೆಗೆ ಕಾರ್ಮಿಕರೊಂದಿಗೆ ಸೇರಿಕೊಂಡು ಸಾಧನೆಗೆ ಇಳಿದ ಅಯ್ಯಪ್ಪ, ನಿರಂತರವಾಗಿ 17 ತಾಸು ಬಿತ್ತನೆ ಕಾರ್ಯ ಮಾಡಿದರು. ನಂತರ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಗ್ರಾಮದ ಹಿರಿಯರಾದ ಪಕ್ಕಪ್ಪ ತಾಳಿ, ವೈ.ಕೆ. ಕುರಿ, ಮುದಕಪ್ಪ ನಿಶ್ಯಾನಿ, ಬಾಳಪ್ಪ ಕಾಶಪ್ಪನವರ, ಎಚ್.ಎಂ. ತಾಳಿ ಉಪಸ್ಥಿತರಿದ್ದರು.