ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಕ್ಕು ಕೇಳುವುದರೊಂದಿಗೆ ಕರ್ತವ್ಯವನ್ನೂ ನಿರ್ವಹಿಸಿ’

Published 15 ಏಪ್ರಿಲ್ 2024, 14:53 IST
Last Updated 15 ಏಪ್ರಿಲ್ 2024, 14:53 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಇಲ್ಲಿನ ವಕೀಲರ ಸಂಘದಲ್ಲಿ ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ವಕೀಲರ ಸಂಘದ ಸದಸ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ ಮಾತನಾಡಿ, ‘ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಭಾರತೀಯನ ಹಕ್ಕು ಕರ್ತವ್ಯವಗಳನ್ನು ವಿವರಿಸಲಾಗಿದೆ. ಎಲ್ಲರೂ ಸಂವಿಧಾನದ ಬಗ್ಗೆ ಅರಿತುಕೊಂಡಿರಬೇಕು. ಹಕ್ಕುಗಳನ್ನು ಕೇಳುವುದಷ್ಟೇ ಅಲ್ಲದೇ, ಕರ್ತವ್ಯಗಳನ್ನೂ ನಿಭಾಯಿಸಲು ಮುಂದಾಗಬೇಕು. ಅಂದಾಗ ಮಾತ್ರ ಭಾರತ ಪ್ರತಿಗಪಥದಲ್ಲಿ ಸಾಗಲು ಸಾಧ್ಯ’ ಎಂದರು.

ವಕೀಲರ ಸಂಘದ ಕಾರ್ಯದರ್ಶಿ ವಿಠ್ಠಲ ನಾಯಕ, ಬಿ.ಎಸ್. ಪಾಟೀಲ್, ಎನ್.ಎಂ. ಗದಗ, ಬಿ.ಎಸ್. ಘೋಂಗಡಿ, ವಿ.ಎಸ್. ಪಶುಪತಿಹಾಳ, ಎಸ್.ಎಸ್. ಶೆಟ್ಟರ, ಐ.ಜಿ. ಹುಲಬಜಾರ, ಎಸ್.ಆರ್. ಅತ್ತಿಗೇರಿ, ಆರ್.ಎಸ್. ಮುದಗಲ್ಲ, ವಿ.ಎಂ. ಹುಡೇದಮನಿ, ಬಿ.ಎನ್. ಸಂಶಿ, ಎನ್.ಐ. ಸೊರಟೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT