ಸದ್ಯ ಒಬ್ಬ ಸರ್ಜನ್, ಚಿಕ್ಕ ಮಕ್ಕಳು ಮತ್ತು ಅರವಳಿಕೆ ತಜ್ಞರು ಬಂದಿರುವುದು ರೋಗಿಗಳಿಗೆ ಹೆಚ್ಚಿನ ಅನುಕೂಲ ಆಗಿದೆ. ಆದರೆ ಇವರು ಗುತ್ತಿಗೆ ಆಧಾರದ ಮೇಲೆ ಬಂದ ವೈದ್ಯರಾಗಿದ್ದಾರೆ. ಇನ್ನು ಪ್ರತಿ ತಿಂಗಳು ಈ ಆಸ್ಪತ್ರೆಯಲ್ಲಿ 70-80 ಹೆರಿಗೆ ಆಗುತ್ತಿದ್ದು, ಹೆರಿಗೆ ತಜ್ಞರ ಅಗತ್ಯವೂ ಇದೆ. ಅರವಳಿಕೆ ತಜ್ಞರು ಇರುವುದರಿಂದ ಹರ್ನಿಯಾ, ಗರ್ಭಚೀಲ, ಮೂಲವ್ಯಾಧಿ, ಅಪೆಂಡಿಕ್ಸ್ಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗಳನ್ನು ಇಲ್ಲಿಯೇ ನಡೆಸಲು ಅನುಕೂಲವಾಗಿದೆ’ ಎಂದು ವೈದ್ಯಾಧಿಕಾರಿ ಡಾ.ಶ್ರೀಕಾಂತ ಕಾಟೆವಾಲೆ ತಿಳಿಸಿದ್ದಾರೆ.