ನಂತರ ಬಿಜೆಪಿ ಬೆಂಬಲಿತರು ಹಾಗೂ ಚುನಾವಣಾಧಿಕಾರಿ ಮೂಲಕ ಮತ ಚಲಾಯಿಸಿದ ಸದಸ್ಯರು, ಚುನಾವಣಾಧಿಕಾರಿ ಸರಿಯಾಗಿ ಚುನಾವಣೆ ಪ್ರಕ್ರಿಯೆ ನಡೆಸಿಲ್ಲ ಎಂದು ಆರೋಪಿಸಿದರು. ಜೊತೆಗೆ ಚುನಾವಣೆ ರದ್ದು ಮಾಡಬೇಕು ಎಂದು ಪಟ್ಟು ಹಿಡಿದರು. ಇದು ನ್ಯಾಯ ಸಮ್ಮತವಲ್ಲ, ಅನ್ಯಾಯವಾಗಿದೆ ಎಂದು ಚುನಾವಣೆ ಅಧಿಕಾರಿಗಳ ಮೇಲೆ ದೂರು ನೀಡುವ ಮೂಲಕ ತನಿಖೆಗೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ನೀಡಿದ್ದಾರೆ.